ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Thursday, November 8, 2012

--ಜ್ಯೋತಿಷ್ಯದ ತಮ್ಮಯ್ಯ--
-----------------------------

ನಾನು  ಹೈಸ್ಕೂಲಿನಲ್ಲಿ ಓದುತಿದ್ದಾಗ,   ಚಿತ್ರಕಲೆ ವಿಷಯದ
ಬಗ್ಗೆ ತಮ್ಮಯ್ಯ ಎಂಬುವರು ಬೋಧಕರಾಗಿದ್ದರು.  ಕೋತಿ ನಾಯಿ ಹಾವು ಕರಡಿ ಗುಲಾಬಿ ಗಣೇಶ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ಚನ್ನಾಗಿ ಬಿಡಿಸುತಿದ್ದರು.  ನಾವು ಸಹ ಅಷ್ಟೇ ಕಲಿತಿದ್ದು.   ಚಿತ್ರಕಲೆ ಪರೀಕ್ಷೆಗೆಂದು ಪಕ್ಕದ ಚನ್ನಪಟ್ಟಣಕ್ಕೆ ಹೋಗಿದ್ದೆವು.   ತಮ್ಮಯ್ಯನವರು ಹೇಳಿಕೊಟ್ಟಿದ ಯಾವೊಂದು  ಅಂಶವು ಪ್ರಶ್ನೆ ಪತ್ರಿಕೆಯಲ್ಲಿ ಕಾಣದೆ ಕಕ್ಕಾ- ಬಿಕ್ಕಿಯಾಗಿ,  ಅವರ ಮೇಲೆ ಕೋಪಗೊಂಡು ಅದೇ ಸಿಟ್ಟಿನಲ್ಲಿ ಪಕ್ಕದ ಚಲನ ಚಿತ್ರಮಂದಿರದಲ್ಲಿ ನಡೆಯುತಿದ್ದ ' ಅನುಭವ ' ಎಂಬ ಕುತೂಹಲಕಾರಿ ಸಿನೆಮಾ ನೋಡಿ ನಮ್ಮ ಕೋಪವನ್ನು ಸ್ವಲ್ಪ ಮಟ್ಟಿಗೆ ಶಮನ  ಮಾಡಿಕೊಂಡಿದ್ದು ಇನ್ನು ನೆನಪಿದೆ.     ತಮ್ಮಯ್ಯನವರ ಮತ್ತೊಂದು ಪಾರ್ಟ್ ಟೈಮ್ ಉದ್ಯೋಗವಿತ್ತು.  ಜ್ಯೋತಿಷ್ಯ ಹೇಳುವುದು.    ಅದನ್ನು ಕೇಳಿದವರಿಗೆ ಎಷ್ಟು ಲಾಭವಾಗಿತ್ತು ಎಂಬುದು ನನಗೆ ತಿಳಿಯದ ವಿಚಾರ.  ನಗರದಲ್ಲಿ ಯಾವುದಾದರು ಬಿಳಿ ಕಾಂಪೌಂಡ್  ಅವರ ಕಣ್ಣಿಗೆ ಬಿತ್ತೆಂದರೆ ಸಾಕು,  ಆ ರಾತ್ರಿಯೇ ಹೋಗಿ   ಆ ಗೋಡೆಯ ಮೇಲೆ,   '' ತಮ್ಮಯ್ಯನವರ  ಜ್ಯೋತಿಷ್ಯಾಲಯ'' ಮಾಟ-ಮಂತ್ರ, ವಶೀಕರಣ, ಧನಲಾಭ, ಆರೋಗ್ಯ ಇವುಗಳ ಬಗ್ಗೆ ಜ್ಯೋತಿಷ್ಯ ಹೇಳಲಾಗುವುದು.  ಒಮ್ಮೆ ಭೇಟಿ ಕೊಡಿ ಎಂದು ವಿಳಾಸ ಬರೆದಿರುತಿದ್ದರು.    ಮನೆಯ ಮಾಲೀಕರು ಬೆಳಿಗ್ಗೆ ಎದ್ದು ಗೋಡೆಯ ಮೇಲಿನ ಬರಹವನ್ನು ನೋಡಿ ಕೆಂಡಮಂಡಲವಾಗುತಿದ್ದರು.   ಮನೆಯ ಬಳಿ ಹೋಗಿ  ತಮ್ಮಯ್ಯನವರ ಕೊರಳ ಪಟ್ಟಿಯನ್ನು ಹಿಡಿದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ  ತಕ್ಷಣ ಅಷ್ಟೇ ಬೇಗ ತಣ್ಣಾಗಾಗುತಿದ್ದರು.   ಕಾರಣ.., ಕೆಂಪು ಬಣ್ಣದಿಂದ  ಬರೆದಿರುತ್ತಿದ್ದ  ಮಾಟ-ಮಂತ್ರ, ವಶೀಕರಣ ಎಂಬ ಪದಗಳು.      ಕೇಳುವುದಕ್ಕೆ ಹೋದರೆ ತಮಗೂ ಮಾಟ ಮಂತ್ರ ಮಾಡಿ ಬಿಟ್ಟಾರೆಂಬ  ಹೆದರಿಕೆಗೆ ಸುಮ್ಮನಾಗುತಿದ್ದರು.      ತಮ್ಮಯ್ಯನವರು ಜ್ಯೋತಿಷ್ಯ ಹೇಳುವುದಕ್ಕೆಂದು  ಪ್ರತ್ಯೇಕ ಜಾಗವನ್ನೇನು ಮಾಡಿರಲಿಲ್ಲ.   ಮನೆಯ ಒಂದು ಕೋಣೆಯನ್ನು ಭವಿಷ್ಯ ಹೇಳಲು ಮೀಸಲಾಗಿಟ್ಟಿದ್ದರು. 

ಹೀಗೆ ಜ್ಯೋತಿಷ್ಯ ಚಿತ್ರಕಲೆ ಎರಡರಲ್ಲೂ ತೊಡಗಿಸಿಕೊಂಡಿದ್ದ ತಮ್ಮಯ್ಯನವರು ಆ ಬೇಸಿಗೆ ರಜೆಯಲ್ಲಿ  ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಬರಬೇಕೆಂದು ನಿರ್ಧರಿಸಿದವರೇ ಸಕುಟುಂಬ ಸಮೇತರಾಗಿ ಪ್ರವಾಸ ಹೊರಡಲು ದಿನಾಂಕವನ್ನು ನಿಗಧಿ ಮಾಡಿಕೊಂಡಿದ್ದರು.   ಅದೇ ಸಂದರ್ಭದಲ್ಲಿ ತಾನು ಪ್ರವಾಸ ಹೊರಟುಬಿಟ್ಟರೆ ಶಾಸ್ತ್ರ ಕೇಳಲು ಬರುವ ಜನರಿಗೆ ತೊಂದರೆಯಾಗುತ್ತದಲ್ಲ ಎಂಬ ಚಿಂತೆ ಸಹ ಕಾಡತೊಡಗಿತು.  ಆದರೆ ಹೆಂಡತಿ ಮಕ್ಕಳು ಪ್ರವಾಸ ಹೋಗಲೇ ಬೇಕೆಂದು ಹಠ ಹಿಡಿದ ಕಾರಣ  ಒಲ್ಲದ ಮನಸ್ಸಿನಿಂದ ಪ್ರವಾಸಕ್ಕೆ ಸಿದ್ಧರಾದರು.    ಪ್ರವಾಸ ಹೊರಡುವ ದಿನ ಮನೆಯ ಬಾಗಿಲಿಗೆ ಒಂದು ಬೋರ್ಡನ್ನು ಬೆರೆದು ತೂಗು ಹಾಕಿ ಹೊರಟರು.   ಅದರಲ್ಲಿ '' ಜ್ಯೋತಿಷ್ಯ ಶಾಸ್ತ್ರಜ್ಞ ತಮ್ಮಯ್ಯ ಹಾಗು ಕುಟುಂಬದವರು ಮೂರು ದಿನಗಳ ಕಾಲ ಪ್ರವಾಸ ಹೋಗಿರುವುದರಿಂದ, ಭಕ್ತರು ೩ ದಿನ ಬಿಟ್ಟು ಬರುವುದು.  ದಯವಿಟ್ಟು ಸಹಕರಿಸಿ '' ಎಂದು ಬರೆದಿತ್ತು...!

ತಮ್ಮಯ್ಯ ಮತ್ತು ಕುಟುಂಬದವರು ಧರ್ಮಸ್ಥಳ, ಹೊರನಾಡು, ಶೃಂಗೇರಿ, ಕೊಲ್ಲೂರು, ಕಳಶ, ಉಡುಪಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ಹಾಗು ಹೊರನಾಡು ಈ ಎಲ್ಲಾ  ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಯಾವುದೇ ತೊಂದರೆಯಿಲ್ಲದಂತೆ ಗುರುವಾರ ಹಿಂದಿರುಗಿದರು.  ತಮ್ಮ
ಯ್ಯ ಟ್ಯಾಕ್ಸಿಯಿಂದ ಇಳಿದವರೇ ಕೀ ತೆಗೆದುಕೊಂಡು ಡೋರ್ ಲಾಕಿನ ಹೊಳಗೆ ಹಾಕಿದರು ಅಷ್ಟೇ.  ಕೀಯನ್ನು ತಿರುವಲೇ  ಇಲ್ಲ.  ಬಾಗಿಲು ತಾನೇ ತಾನಾಗಿ ಹಿಂದೆ ಹೋಯಿತು.   ಒಳಗಿನ ದೃಶ್ಯ ನೋಡಿ ತಮ್ಮಯ್ಯನವರಿಗೆ ತಲೆ ತಿರುಗಿದಂತಾಯ್ತು.   ಹಿಂದೆಯೇ ಒಳ ಬಂದ ಹೆಂಡತಿ ಮಕ್ಕಳು ಅವಕ್ಕಾಗಿ ನಿಂತುಬಿಟ್ಟರು.  ಒಂದು ಕ್ಷಣ ಅವರಿಗೆಲ್ಲ ಬೇರೆ ಮನೆಗೆ ಬಂದಿದ್ದೇವೆಯೇ ಎಂಬ ಅನುಮಾನ ಕಾಡತೊಡಗಿತು.   ಆದರೆ ಬಾಗಿಲಿಗೆ ನೇತು ಹಾಕಿದ್ದ ಬೋರ್ಡು ಇದೇ  ತಮ್ಮಯ್ಯನವರ  ಮನೆಯೆಂದು ಸಾರಿ ಹೇಳುತ್ತಿತ್ತು. 

ನಡೆದದ್ದಿಷ್ಟೇ...., ತಮ್ಮಯ್ಯನವರು ಪ್ರವಾಸ ಹೋಗಿದ್ದಾಗ ಬಾಗಿಲಿಗೆ ನೇತು ಹಾಕಿದ್ದ  ಬೋರ್ಡು ದಾರಿಹೋಕರ ಗಮನ ಸೆಳೆಯುತ್ತಿತ್ತು. ಅದರಲ್ಲೂ ವಿಶೇಷವಾಗಿ  ಕಳ್ಳರ ಗಮನವನ್ನು ಸೆಳೆಯಿತು.   ತೊಂದರೆಯಿಲ್ಲದ ಅವಕಾಶ,  ಅಕ್ಕ-ಪಕ್ಕ ಯಾವುದೇ ಮನೆ ಸಹ ಇರಲಿಲ್ಲ.   ಮನೆಯವರು ಬರುವುದು ಇನ್ನು ಮೂರು ದಿನವಾಗುತ್ತದೆ ಎಂದು ಬಾಗಿಲಿಗೆ ತೂಗು ಹಾಕಿದ್ದ ಬೋರ್ಡು ಸಾರಿ ಸಾರಿ ಹೇಳುತಿದೆ.   ಕಳ್ಳರಿಗೆ ಖುಷಿಯೋ ಖುಷಿ.   ಕಳ್ಳರು ಹಗಲಿನಲ್ಲಿಯೇ ಒಂದು ಲಾರಿಯನ್ನು  ತಂದವರೇ ಕೆಟ್ಟುಹೋಗಿದೆ ಎಂಬಂತೆ ತಮ್ಮಯ್ಯನವರ ಮನೆ ಮುಂದೆ ನಿಲ್ಲಿಸಿ,  ಆ ರಸ್ತೆಯಲ್ಲಿ ಬೇರೆ ವಾಹನಗಳು ಬಾರದಂತೆ  ಕಲ್ಲನ್ನು ಅಡ್ಡ ಇಟ್ಟಿದ್ದರು.   ಆ  ದಾರಿಯಲ್ಲಿ ತಿರುಗಾಡುವವರು  ಲಾರಿ ಕೆಟ್ಟು ನಿಂತಿರಬೇಕೆಂದು ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದೆ ಹೋಗುತಿದ್ದರು.    ಕಳ್ಳರು ಮಧ್ಯರಾತ್ರಿಯಲ್ಲಿ ಬಂದವರೇ, ಜ್ಯೋತಿಷ್ಯದ ಕೋಣೆಯಲ್ಲಿದ್ದ ಸಾಮಾನುಗಳನ್ನು ಬಿಟ್ಟು, ಕಸ ಗುಡಿಸುವ ಪೊರಕೆ ಸಮೇತ  ಸಾವಾಕಾಶವಾಗಿ ಮನೆಯಲ್ಲಿದ್ದ ಎಲ್ಲಾವಸ್ತುಗಳನ್ನು ಕದ್ದು ಲಾರಿಯಲ್ಲಿ ಸಾಗಿಸಿದ್ದರು..............................., 

Sunday, November 4, 2012



ಗೆದ್ದಲು ಹುಳಗಳು
------------------------


ಪವರನೆಂಬ ದುರಹಂಕಾರಿಯ  ನಿರ್ಧಾರ 
ಹಸಿದೊಟ್ಟೆಗಳ ಮೇಲಿನ ಪ್ರಹಾರವಾಯ್ತು.
ದವಸ ಧಾನ್ಯಗಳ ತಿಂದುಂಡ ಹೆಗ್ಗಣಗಳು ದುಂಡಗಾದವು,
ಲೆಕ್ಕಕ್ಕೆ ಸಿಗದ ದವಸ ಮಣ್ಣಾಯ್ತು.
ಪಶ್ಚಾತಾಪದ ಕುರುಹು ಇವನಿಗಿಲ್ಲವಾಯ್ತು.

ತರಂಗಾಂತರಂಗ ಹೊಕ್ಕ ಕೀರೀಟವಿಲ್ಲದ ರಾಜ
ಒಂದೇ ಕಿಕ್ಕಿಗೆ ಭೋಜನವುಂಡ ಕವಿಯತ್ರಿ
ದುರಾಸೆ ಮುಂದಾಗಿ ಜೈಲುಪಾಲಾದರು.

ಕ್ರೀಡೆಗೂ ಗ್ರಹಣ ಬಡಿಸುವ ಕಲೆಗಾರ ಕಲ್ಮಾಡಿ
ಅಂಡೊರೆಸುವ
ಕಾಗದಕ್ಕೂ
ಕೋಟಿ ಕೋಟಿ ಬಾಚಿದ್ದು ಇವನ ಜೀವಮಾನ ಸಾಧನೆ
ಬಿಡುಗಡೆಯಾದಮೇಲೆ ಕೊಂಡಾಡಿದ್ದು ಆ ಪಕ್ಷದ ಮಹತ್ಸಾದನೆ.

ಸಿಂಗ್ ಕಿಂಗ್ ಆದಿಯಾಗಿ ಕಲ್ಲಿದ್ದಲ ಕಪ್ಪಲ್ಲಿ ಮುಖತೊಳೆದು

ಏನು ಆಗಿಲ್ಲವೆಂದು ತಿಪ್ಪೆಸಾರಿಸಿ, ಕನ್ನಡಿ ಹಿಂದೆ ನಿಂತುಬಿಟ್ಟವರು
ಮೂರು ಬಿಟ್ಟದ್ದು ಎಲ್ಲರಿಗು ತಿಳಿದಿಲ್ಲವೆಂದು ಮುಸಿ ಮುಸಿ ನಕ್ಕಿದ್ದು
ಕಾಂಗ್ರೇಸ್ ಗಿಡದಷ್ಟೇ ಸತ್ಯ. 

ಗಡಾರಿ ಹಿಡಿದ ಗಡ್ಕರಿ
ಪ್ರಹಾರ ಮಾಡಿದ್ದು ಯಾವ ಪರಿ
ಆಳುವವನ ಹಿಡಿದು ಉಳುವವನ
ಹೆಡೆಮುರಿ ಕಟ್ಟಿ ಆದನು ಸಿರಿ-
ವಂತ.  ಇಂಗು ತಿಂದ ನಿ-ತಿನ್
ಮಂಗನಂತಾದವರು ಸ್ವಯಂ ಸೇವಕರು. 

ರಾಷ್ಟದಳಿಯ ಮನೆತೊಳಿಯ
ಅವನೊಬ್ಬ ವಾದ್ರಾ..,
ಕೆಲಸ  ಸೊನ್ನೆ.  ಅರ್ಹತೆ ಪ್ರಿಯಳ ಅಂಕ
ಅತ್ತೆಯ ನೆರಳು.  ಡಿ ಎಲ್ ಎಪ್ ಇವಗೆ ಮರುಳು.
ಬಹುಪರಾಕ್ ಮಂದಿ ತಾರಿಸುತಿಹರು ತಿಪ್ಪೆ  

ರಾಷ್ಟ್ರಸೇವಕರಿಗೆಂದಿದ್ದ ಸೂರ
ಸೂರೆಗೊಂಡರನೇಕರು. ಲಜ್ಜೆಯಿಲ್ಲದ ಮಂದಿ
ಮಂಡಿಯೂರಿ ನೆಕ್ಕಿಹರು ಇಟಾಲಿಯನ್ನಿನ ಚಪ್ಪಲಿ. 
ಅಭಯ ಹಸ್ತ ದೊರಕಿ, ನಗುತಿಹರು ಪ್ರೇತದಂತೆ. 

ನೈಸಾಗಲಿಲ್ಲ  ರಸ್ತೆ.  ವೈನಾದರು ತಿಂದುಂಡವರೆಲ್ಲ.

ಕಣಿ ಹೇಳುವಂತೆ ಕಾಣ್ವ ಖೇಣಿ .
ಹರಳೆಣ್ಣೆ ಕುಡಿದಂತ ಗೌಡ.
ಸಿಡುಕು ಮೊರೆ ಸುಬ್ಬನೆಂಬ ಅಡ್ಡಾದಿಡ್ಡಿ
ವಿಗ್ಗಿನಡಿಯಲ್ಲಿ ಕೆಲಸ ಮುಗಿಸಿದ ಚತು-
ರ.  ಕರೆದರಡ್ಡಿಯಿಲ್ಲ ಇವ ಕುಟಿಲ ಕೃಷ್ಣಯ್ಯ.

ಕರುನಾಡ ಮುಷ್ಠಿಯಲಿಡಿದು
ಪುರಜನರ ಕಾಲಡಿಯಿಕ್ಕಿ 
ಮಣ್ಣನ್ನೇ ಹೊನ್ನಾಗಿಸಿ ಮೆರೆದು
ಗಾಲಿಯನೇರಿದ ಜನಾರ್ಧನನೀಗ
ಕಂಬಿಯ ಹಿಂದೆ ಕಂಬಿನಿ ನುಂಗುತ
ಹುಸಿನಗೆ ಬೀರುತಿಹನು. 

ಹುದ್ದೆಯ ಜಿದ್ದಿಗೆ ಬಿದ್ದು
ಟೊಂಕಕಟ್ಟಿ ದುಡಿದು
ಅಧಿಕಾರಕ್ಕೇರಿ, ದೋಚಿ-ಬಾಚಿ
ಕೊನೆಗಾಯ್ತು  ಯಡ್ಡಿಯ ಅವಸಾನ.