ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Wednesday, April 10, 2013

ಮೊದಲು ನೀ ಬದಲಾಗು.!
---------------------------
ಬಿಸಿರಕ್ತದಲಿ
ಮಿಂದೆದ್ದ ಬೆರಣಿಗಳು
ನಿಗಿ ನಿಗಿ
ಬೇಯ್ದಾಕ್ಷಣಕೆ
ನೀರಲ್ಲಿ
ಪರಿವರ್ತನೆ,
ಬದಲಾವಣೆ
ಬರಬೇಕೆನ್ನುವ ಸಹಜತೆಗೆ
ಶಾಖಕಿಲ್ಲವೇ ವ್ಯವಧಾನ.!
ಮಾನಗೆಟ್ಟ ಬಿಸಿಗೆ
ಅರಿವಾಗಲಿಲ್ಲವೆ ಹೊಸಗೆ.!
ಎದೆಗೆ ಗುಂಡಿಕ್ಕಿ
ಮೀಟಿದಾಗಲೇ ತಿಳಿಯಲಿಲ್ಲವೆ
ಹುಲಿಯ ಚಿತ್ತಾರವಿದು
ಗಮನಿಸಿದರೆ; ಕಾಗದದಮೇಲೆಂದು.
ನಡೆಯಲ್ಲಿ ನುಡಿಯಿರಲಿ
ನಡುಕ ಬಂದರೆ
ಛತ್ರಿಯ ಕೆಳಗಿನ ನೆರಳಿಗೆ
ಜಾಲಿಯ ಮರ
ಗಾಳೀಯ ಬೀಸಿದಂತೆ.!
ಇನ್ನಾದರು ತಿಳಿದೀತೆ
ಹೊಂಗೆಯ  ಮರ ತಂಪೆಂದು.!!!