ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Saturday, February 7, 2015


SÁ° ¥ÀÄlzÀ PÀªÀ£À

SÁ° £À£Àß vÀ¯É SÁ°
EzÀÄ EwÛÃa£À RAiÀiÁ°
¨ÉgÀ½UÀAnzÀ ±Á¬Ä
ªÀÄÆr¸ÀzÉ CPÀëgÀ
ºÁ¼É SÁ° ºÁ¼É
zsÀÈwUÉqÀzÉ VÃazÉ vÉÆÃZÀzÉ
ºÁUÉ ¸ÀĪÀÄä£É;

ªÀiÁ£ÀªÀvÉV°è ªÀiÁ£À«®è, ªÀiÁAiÀĪÁV
ªÀiÁ£ÀªÀ, «dÈA©ü¹gÀĪÀ zÁ£ÀªÀ
PÀÄgÀÄqÀÄ PÁªÀÄ PÀtÄÝA©
C§¯ÉAiÀÄ ªÉÄÃ¯É ClÖºÁ¸À
ºÀ¸ÀļÉAiÀÄ ªÉÄÃ¯É ¥ËgÀĵÀ
EªÀgÀÄ £À£Àß ¸ÀªÀiÁd
£Á£ÀÄ E°è d£À¸ÁªÀiÁ£Àå

¥ÁµÁt PÀÄrzÀ ¥ÁRAr
ªÀÄ£À¸ÀÄUÀ¼À°,
ªÀÄA¢gÀ ªÀĹâ ZÀZïð JA§
£ÀqÀĪÀÄ£ÉAiÀÄ C¦ÃªÀÄÄ £ÉvÀÛUÀqÀj
£ÀgÀ£ÁrUÀ¼ÀÄ £ÀAeÁzÀªÀÅ
PÀtÄÚ PÉA¥ÁV £ÉvÀÛgÁ¬ÄvÀÄ PÀ¥ÀÄà

zsÀªÀÄð PÀªÀÄð ¸ÀA¸ÀÌøwUÀ¼À ºÀÄnÖUÉ
PÁgÀtgÀÄ EªÀgÉÃ, ªÀPÁÛgÀgÀÄ EªÀgÉÃ,
¥Á®ÄzÁgÀgÀÄ EªÀgÉÃ. EªÀgÀ
JzÉAiÀÄ ¨sÁªÀUÀ¼ÀÄ §AeÉAiÀiAvÁV
¨sÁæªÀÄPÀ G¹gÁV, §¹gÁUÀ°®è ¨sÁævÀÈvÀé
E£Éß°èAiÀÄ ºÉjUÉ ¨ÉãÉ..!!

                                             

bÉÃ......! F UÉÆqÀÄØ ¨sÁæAvÀÄ
¥ÀxÀå«®èzÀ gÉÆÃUÀ.
PÀ¸ÀzÀ vÉÆnÖAiÀİè
UÉÆ§âgÀªÁUÀ¨ÉÃPÁzÀ «µÀAiÀÄ
£À£ÀUÉÃPÉ DUÀ¨ÉÃPÀÄ ªÀÄÄRå.!
AiÀiÁjUÀÆ ¨ÉÃqÀzÀ PÁqÀzÀ ¸ÀAUÀwUÀ¼ÀÄ
DUÀ¢gÀ° £À£ÀUÉ ¸ÀAUÁw
£Á£ÀÄ ºÁUÀÄ £À£Àß ¸ÀA¸ÁgÀ
EzÀ®èªÉà £À£Àß ¥Àæ¥ÀAZÀ
ªÀÄvÉÛÃPÉ F Mt ªÀiÁvÀÄ
PÉ®¸ÀPÉÌ ¨ÁgÀzÀ ºÀgÀmÉ.!

E¯Áè...... PÀªÀ£ÀªÁUÀ°®è
¥ÀzÀUÀ¼À ¨É¸ÀÄUÉ ¸Àj ºÉÆAzÀ°®è
§gÀzÀzÉ®èªÀ£ÀÄß ºÀjzÀÄ ºÁQzÉ
ªÉÆzÀ°UÉ §AzÉ ªÀÄvÀÛzÉà ±ÀÆ£Àå.

SÁ° vÀ¯É zɪÀézÀ £É¯É
F ¸ÀvÀåzÀ GQÛUÉ
ºÉƸÀvÉÆAzÀÄ ¥ÀÄl ¸ÉÃ¥ÀðqÉ.!
EzÀĪÉà £À£Àß SÁ° ¥ÀÄlzÀ PÀªÀ£À.



Tuesday, August 13, 2013

ಬೈರಾಗಿ ದೇಶಿಯರು
-----------------
ಕೌಣಪನನ್ನು ಕಂಡು ಕೌತುಕ ತೋರಿ
ಶಾಂತಿಮಂತ್ರ ಬೋಧಿಸುವ ಬೈರಾಗಿ
ನನ್ನ ದೇಶ. ಸಾವಿನ ಮನೆಯ ಇಟ್ಟಿಗೆ
ನನ್ನ ಯೋಧ!. ಧರ್ಮಗಳೇ ಆಯುಧ!
ಪಾಖಂಡಿ ಮನಸುಗಳ ಸೋಗಿಗೆ
ಭ್ರಾತೃತ್ವ ಬೆಸೆಯುವ ಭ್ರಾಂತಿಗೀಗ
ಅರವತ್ತೇಳನೆ   ಸಂವತ್ಸರ!!

ಹೊಂದಾಣಿಕೆ ಎಂಬುದಿಲ್ಲಿ ನಮಗೆಲ್ಲ
ಹಾಸುಹೊಕ್ಕಾಗಿ ಹೆಣೆದ ಚಾಪೆಯಾದರೆ
ಬಾಯಿತುಂಬಿ ಉಗುಳುವಷ್ಟು
ವಿಶಾಲತೆ ತುಂಬಿ ತುಳುಕಿ
ಕಿಚ್ಚು ಕೀವು ತುಂಬಿ ರೋಗಿಷ್ಟವಾಗಿದೆ

ವಿರೋಧಕ್ಕೂ ಬರ ಬಂದು
ವಿಪರೀತ ಬುದ್ದಿ ತಲೆ ತುಂಬಿದೆ
ಆಲಸ್ಯವೋ ಕುಚೋದ್ಯವೋ
ಉಚ್ಚ್ವಾಸ ನಿಶ್ವಾಸವೂ ಕೃತಕ
ಕೌಲಿಕನೆಂದರೆ ಅಡ್ಡಿಯಿಲ್ಲ
ಭಿನ್ನತೆ ಎಂಬ ಭಗ್ನ ಕಣ್ಣಾಗಿ
ವಾಸ್ತವವ ಕುರುಡಾಗಿಸಿದೆ.

Monday, August 5, 2013

ಮೈಲಿಗೆ
------------
ನನ್ನ ಅಷ್ಟೂ ಕನಸುಗಳನ್ನು
ಮೂಟೆ ಕಟ್ಟಿ ಅಟ್ಟದ ಮೇಲೆಸೆದಿದ್ದೆ.
ಈಗ ಒ೦ದೊ೦ದಾಗಿ ತೆರೆಯುತಿದ್ದೇನೆ
ಚಿತ್ರವಿಲ್ಲ ಬರಹವಿಲ್ಲ ಖಾಲಿ ಖಾಲಿ
ಆಶ್ಚರ್ಯ, ಕನಸಿಗೆ ಮೈಲಿಗೆ ಮೆತ್ತಿದೆ!

ಅಡಿಪಾಯವಿಲ್ಲದ ನೆಲದ ಮೇಲಿನ
ಸೂರಿನ ಕೇಳಗಿನ ಉಸಿರು, ಬೆನ್ನುತೋರಿಸಿ ಚಿತೆಗೆ
ಇದ್ದಷ್ಟು ದಿನ ಜೀವ೦ತ ಶವ.
ನನ್ನ ದೇಹದ ಸ್ವಾಧೀನ ಪರಾವಲ೦ಬಿ
ಈಗ ಉಸಿರಿಗೂ ಮೈಲಿಗೆ ಮೆತ್ತಿದೆ!

ದನಿಯೆತ್ತುವ ನಾಲಿಗೆಯ ನರಕು೦ದಿದೆ!
ಊಳಿಡುವ ನರಿಗಳ ಕೂಗು ಕಿವಿ ತು೦ಬಿದೆ!
ಸತ್ಯ ತಿಳಿವ ಕಣ್ಣಲ್ಲಿ ತು೦ಬಿ ಬರುತಿದೆ ಹಳದಿ
ವ್ರಣ ಕೆರೆದಷ್ಟು ನಚ್ಚಗೆ, ಮತ್ತಷ್ಟು ದೊಡ್ಡ ಗಾಯ
ಕ್ರಮೇಣ ಮೈ ಮನಸ್ಸೆಲ್ಲ ಮೈಲಿಗೆ!


Friday, June 14, 2013

ನಾನು ಬೆತ್ತಲಾದಾಗ..
--------------------
ನೀನು ಸನಿಹವಿದ್ದಷ್ಟು  ಘಳಿಗೆ,
ಹೊತ್ತು, ಸರಿದು ಮುಸುಕು ಹೊದ್ದು
ನಿದ್ದೆಗೆ ಜಾರಿದ್ದು ತಿಳಿಯಲಿಲ್ಲ.
ಏಕೆಂದರೆ  ನನ್ನ ಪ್ರೀತಿ ಬಲಿಯುತ್ತಿತ್ತು;
ಬಯಕೆ ಬುಸುಗುಟ್ಟುತ್ತಿತ್ತು;

ನಿಜ! ಅಷ್ಟೇಕೆ,
ನಿನ್ನ ಮೈ ವಾಸನೆಯಲಿ ಅರಳಿ
ತುಂಬಿದೆದೆಯ ನಡುವೆ ನಲುಗಿ
ನಿನ್ನನ್ನೇ ಆವರಿಸುವಷ್ಟು ದಾಹ!
ಸಂಸರ್ಗದಲಿ ಸಂಸಿದ್ಧಿ ಹೊಂದುವ ತವಕ!

ಬಯಕೆ ಆಸೆ ಮೋಹ ಪ್ರೀತಿಗೆ ಲೇಪ
ನೀನು,  ಅದರ ನೆರಳೆಂದರೂ  ಸರಿಯೇ!
ನೆರಳಂತೆ ಮನಸ್ಸು,
ಹಿಂಬಾಲಿಸುತ್ತಲೇ ಇರುತ್ತದೆ
ಭಾವನೆಗಳಿಗೆ ಆತ್ಮಸಾಕ್ಷಿ ಬಾಗಿಲು 

ಆತ್ಮವಂಚನೆ ನನಗೆ ಸಿದ್ಧಿಸಿಲ್ಲ
ಬೆತ್ತಲೆ ಊರಲ್ಲಿ  ಬೆದೆಗೆ ಬಂದವನಲ್ಲ
ನಿನ್ನ ಮುಂದೆ ಬೆತ್ತಲಾಗಬೇಕಷ್ಟೇ!
ಬೆಳಕು ಬೆತ್ತಲೆಯಲ್ಲವೇ?
ಹಾಗೆ ನಾನು ಬೆತ್ತಲೆ!


Friday, May 10, 2013

                                             ====   ಮೋಡದ ಮರೆಯಲ್ಲಿ ==

          ತನಗಿಂತ ಇನ್ನೊಂದು ವರ್ಷ ಮೇಲ್ಪಟ್ಟ ಮಗುವಿನೊಂದಿಗೆ ಜೂಟ್ ಆಟವಾಡಿಕೊಂಡು ಆಯತಪ್ಪಿ ಮೋರಿಯೊಳಗೆ ಬಿದ್ದು ಹೊರಬರಲಾರದೆ ಆ ಮಗು ಅಳುತ್ತಿತ್ತು.   ಜೊತೆಯಲ್ಲಿದ್ದ  ಮತ್ತೊಂದು ಮಗು ಗಾಬರಿಯಿಂದ   ಈ ಸುದ್ದಿಯನ್ನು ತಿಳಿಸಲು ದೂರದಲ್ಲಿದ್ದ ಮನೆಯ ಕಡೆಗೆ ಅಳುತ್ತಾ ಓಡತೊಡಗಿತು. 

             ಆತನ ಕೆದರಿದ ಕೂದಲು ಎಣ್ಣೆ ನೀರು ಕಂಡು ತುಂಬಾ ದಿನಗಳಾಗಿದೆ ಎಂದು ಸಾರಿ ಹೇಳುತ್ತಿತ್ತು.  ಮೈಮೇಲಿನ ಬಟ್ಟೆಯದು ಅದೇ ಕಥೆ.  ಆತನ ಹೆಗಲಿನ ಮೇಲೆ ಜಿಡ್ಡು ಕಟ್ಟಿದ ಚೀಲವೊಂದು ನೇತಾಡುತ್ತಿತ್ತು.  ಈ ಅವತಾರವೇ ಸಾಕು.   ಅವನು ಚಿಂದಿ ಆಯುವ   ಹುಡುಗನೆಂದು  ಕರೆಯಲು.  ಹೀಗೆ ಪೇಪರ್, ಪ್ಲಾಸ್ಟಿಕ್ ಅರಸುತ್ತಾ ಮೋರಿಯ ಸಮೀಪ ಹೋಗುತಿದ್ದವನಿಗೆ ಮಗು ಅಳುತಿದ್ದ ಶಬ್ದ ಕೇಳಿಸಿತು.  ಅಳುವಿನ ಶಬ್ದವನ್ನು ಅನುಸರಿಸಿ ಹೊರಟವನಿಗೆ ಕಂಡದ್ದು ಸುಮಾರು ಮೂರು ವರ್ಷದ ಮಗು.  ಆ ಮಗುವನ್ನು ಮೋರಿಯಿಂದ  ಮೇಲಕ್ಕೆತ್ತಿ  ಅದರ ಕೈ ಕಾಲುಗಳಿಗೆ ಮೆತ್ತಿಕೊಂಡಿದ್ದ ಮೋರಿಯ ಕೊಳಕನ್ನು ತನ್ನ ಬಳಿಯಿದ್ದ ಕೊಳಕು ಬಟ್ಟೆಯಿಂದಲೇ  ಒರೆಸಿದನು.    ಅಳು ನಿಲ್ಲಿಸಲೆಂದು ತನ್ನ ಕೊಳಕು ಜೇಬಿನಲ್ಲಿದ್ದ ಒಂದು ಚಾಕೊಲೇಟ್ ನೀಡಿದರು ಮೋರಿಯೊಳಗೆ ಬಿದ್ದ ಗಾಬರಿಗೋ ಇಲ್ಲ ಇವನ ಅವತಾರವನ್ನು ನೋಡಿಯೋ ಆ ಮಗು ಮತ್ತಷ್ಟು ಅಳಲು ಶುರುಮಾಡಿತು.  ತಕ್ಷಣ ಮಗುವನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸಂತೈಸತೊಡಗಿದರು ಸಹ    ಆ ಮಗುವಿನ ಅಳು ಕಡಿಮೆಯಾಗಲೇ ಇಲ್ಲ.   ಆ ಮಗುವಿನ ಬಗ್ಗೆ ಯಾರಲ್ಲಿ ವಿಚಾರಿಸುವುದು ಎಂದು ತೋಚದೆ  ಗೊಂದಲದಿಂದ ನಿಂತಿದ್ದನು.  ಎದಿರಾಗಿ ಬರುತ್ತಿದ್ದ ಕೆಲವರು  ಅಳುತಿದ್ದ ಮಗು ಹಾಗು ಅದನ್ನು ಸಂತೈಸಲು ಒದ್ದಾಡುತಿದ್ದ  ಚಿಂದಿ  ಆಯುವ ಹುಡುಗನನ್ನು  ಅನುಮಾನದಿಂದ ನೋಡತೊಡಗಿದರು.  ಅವರಳೋಗೊಬ್ಬ ''ಇವನು ಮಕ್ಕಳ ಕಳ್ಳನ ಹಾಗೆ ಕಾಣ್ತಾನೆ.  ಮಗುನ ಎಲ್ಲೋ ಕದ್ದುಕೊಂಡು ಬಂದಿರಬೇಕು'' ಎಂದನು.  ಅವನ ಮಾತಿನಿಂದ ಉತ್ತೇಜಿತರಾದವರಂತೆ ಎಲ್ಲರು ಹಿಡ್ಕೊಳ್ಳಿ ಮಕ್ಕಳ ಕಳ್ಳ ಎಂದು ಕೂಗತೊಡಗಿದರು.     ಅವರ ಕೂಗಿಗೆ ಮತ್ತೆಲ್ಲೋ  ಇದ್ದ ಮತ್ತಷ್ಟು ಜನರು ಒಮ್ಮೆಲೇ  ಪ್ರತ್ಯಕ್ಷರಾದರು.  ಅವನಿಗೆ ಮಾತನಾಡಲು ಅವಕಾಶಕೊಡದಂತೆ ಎಲ್ಲಂದರಲ್ಲಿ ಹೊಡೆಯತೊಡಗಿದರು.  ಅವನು ನಿಜ ವಿಷಯವನ್ನು  ಹೇಳುತಿದ್ದರು ಯಾರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.  ಮತ್ತೊಂದು ಮಗುವಿನ ಕೈ ಹಿಡಿದುಕೊಂಡು ಓಡಿ ಬಂದ  ಮಗುವಿನ ತಾಯಿ  ತನ್ನು ಮಗು ಮೋರಿಗೆ ಬಿದ್ದಿದ್ದ ವಿಷಯವನ್ನು ಹೇಳುವ ತನಕ ಚಿಂದಿ  ಆಯುವ ಹುಡುಗ  ಅಲ್ಲಿದ್ದವರಿಗೆಲ್ಲರಿಗೂ  ಅಕ್ಷರ ಸಹ ಫುಟ್ಬಾಲಾಗಿ   ಹೋಗಿದ್ದ.   ನಾ ಮುಂದು ತಾ ಮುಂದು ಎಂದು ಒದೆಯುತಿದ್ದವರೆಲ್ಲರು,  ಒಹ್  ಹಾಗ..,  ಈ ನನ್ನ ಮಗ ಮೊದಲೇ ಹೇಳಿದ್ದರೆ ಏಟಾದರು   ತಪ್ಪಿರೋದು ಎಂದು ನಗುತ್ತಾ ಹೇಳಿ ಹೊರಟುಹೋದರು.  ತಾಯಿ ಮಗುವನ್ನು ಎದೆಗವುಚಿಕೊಂಡು ಸಂತೈಸುತ್ತಾ ಮನೆಯ ಕಡೆಗೆ ಹೊರಟಳು.

        ಮೂಗು ಬಾಯಿಯಲ್ಲಿ ಹರಿಯುತಿದ್ದ ರಕ್ತವನ್ನು ಒರೆಸಿಕೊಳ್ಳುವ ಶಕ್ತಿಯು ಇಲ್ಲದವನಂತೆ ಆ ಚಿಂದಿ  ಆಯುವ ಹುಡುಗ ರಸ್ತೆಯ ಬದಿಯಲ್ಲಿ ನರಳುತ್ತಾ ಬಿದ್ದಿದ್ದನು.  ಈ ಘಟನೆಗೆ ಸಾಕ್ಷಿಯಾಗಿದ್ದ ಸೂರ್ಯ ಮೋಡದೊಳಗೆ ಮರೆಯಾಗಿಹೋದ!!
                                      ===========

Wednesday, April 10, 2013

ಮೊದಲು ನೀ ಬದಲಾಗು.!
---------------------------
ಬಿಸಿರಕ್ತದಲಿ
ಮಿಂದೆದ್ದ ಬೆರಣಿಗಳು
ನಿಗಿ ನಿಗಿ
ಬೇಯ್ದಾಕ್ಷಣಕೆ
ನೀರಲ್ಲಿ
ಪರಿವರ್ತನೆ,
ಬದಲಾವಣೆ
ಬರಬೇಕೆನ್ನುವ ಸಹಜತೆಗೆ
ಶಾಖಕಿಲ್ಲವೇ ವ್ಯವಧಾನ.!
ಮಾನಗೆಟ್ಟ ಬಿಸಿಗೆ
ಅರಿವಾಗಲಿಲ್ಲವೆ ಹೊಸಗೆ.!
ಎದೆಗೆ ಗುಂಡಿಕ್ಕಿ
ಮೀಟಿದಾಗಲೇ ತಿಳಿಯಲಿಲ್ಲವೆ
ಹುಲಿಯ ಚಿತ್ತಾರವಿದು
ಗಮನಿಸಿದರೆ; ಕಾಗದದಮೇಲೆಂದು.
ನಡೆಯಲ್ಲಿ ನುಡಿಯಿರಲಿ
ನಡುಕ ಬಂದರೆ
ಛತ್ರಿಯ ಕೆಳಗಿನ ನೆರಳಿಗೆ
ಜಾಲಿಯ ಮರ
ಗಾಳೀಯ ಬೀಸಿದಂತೆ.!
ಇನ್ನಾದರು ತಿಳಿದೀತೆ
ಹೊಂಗೆಯ  ಮರ ತಂಪೆಂದು.!!!





Monday, January 14, 2013

ಸಿಹಿಮುತ್ತು

ನೀ ನೀಡುವ
ಒಂದೊಂದು ಮುತ್ತಿನಲು
ಅದೆಷ್ಟೊಂದು ಸಿಹಿಯಡಗಿದೆ
ಕಾರಣವೇನೆಂದು
ಮತ್ತಿನಿಂದುಲಿದಳವಳು!
ವೈದ್ಯರೇಳಿದ ಮಾತನ್ನು
ನಂಬಿರಲಿಲ್ಲ ನಾನು,
ದೃಢವಾಯಿತೀಗ
'ಸಕ್ಕರೆಖಾಯಿಲೆ'ಇದೆ ನನಗೆ
ಅದಕ್ಕಷ್ಟೊಂದು ಸಿಹಿಯೆಂದನವನು!!  


ವಿಪರ್ಯಾಸ
-------------
ಅವನು..,
ನಾ
ಬರೆದು
ಕಳುಹಿಸಿಕೊಟ್ಟ
ಪ್ರೇಮಪತ್ರಗಳೆಲ್ಲವನ್ನೂ
ಓದಿದೆಯ-ಇಷ್ಟವಾಯಿತೆ.?

ಅವಳು...,
ನಿನ್ನ ಮಿತ್ರ
ಅವುಗಳನ್ನು
ಕೊಡುತ್ತಿರಲಿಲ್ಲ
ನನ್ನ
ಮುಂದೆ
ಓದುತಿದ್ದ.!

ಇಷ್ಟವಾಯಿತೆ.?

ಹೌದು
ಓದುತಿದ್ದ ರೀತಿ
ಹಾಗು
ಅವನು ಎರಡೂ
ಇಷ್ಟವಾಯಿತು.!!!


 ನೆನಪು
--------
ನಲ್ಲ
ನನ್ನ ತುಟಿಗೆ
ನೀ ಮುತ್ತನ್ನೀಯುವಾಗ
ಕಣ್ಣು ಮುಚ್ಚುವುದು ಏಕೆ ?

ಮತ್ತಾರಿಗೋ
ನೀಡಿದ
ಮುತ್ತಿನ ನೆನಪು
ಬಾರದಿರಲೆಂದು.!!


 ಅವನು-ಅವಳು
---------------
ಅವನು,
ನನ್ನ ಕಣ್ಣಲ್ಲಿ
ಕರಗಿ
ಕನಸಲ್ಲಿ ಕಾಡುವ
ನೀನು
ಹೃದಯದಲ್ಲಿ
ಕೂರುವುದು
ಯಾವಾಗ.?

ಅವಳು,
ನನ್ನ ಮನೆಗೆಂದು
ಬಂದು
ಎನ್ನ
ನಲ್ಲನ ಕೇಳು
ಅವರೊಪ್ಪಿದರಡ್ಡಿಯಿಲ್ಲ
ಯಾವಾಗ ಬರುವಿ
ಹೇಳು.?

Wednesday, January 9, 2013

ಭ್ರಾಂತಿ ಎಂಬ ಸ್ಖಲನ
---------------------------

ಹುಳಿ-ಉಪ್ಪು ಮುಂದಾಗಿ
ಸೊಕ್ಕಿ ಉಕ್ಕುವ ಗೇಹ
ಬಯಕೆಯ ಬಾಣಲಿಯಲಿ-
ಸಂಡಿಗೆ. ಉಪ್ಪುಕಾರ ಜೊತೆಯಲಿ.

ಕನಸುಮೇಲೋಗರ.!
ಹಳ್ಳ ದಿಣ್ಣೆ  ತೆವರಿ ತಿಟ್ಟಿನ
ಬದದಾಚೆಗೀಚಿನ ತೂಗಿ ಬಾಗೊ
ಚಲುವಿನಾ ಪ್ರಕೃತಿ.

ಸೆಳೆಯಲಷ್ಟೇ ಸಾಕು; ವಿಕೃತಿ
ಮುಂದಾಗುವುದೆಲ್ಲ ವಿಸ್ಮೃತಿ
ಮೃಗಕ್ಕಿಲ್ಲ ಬಂಧುತ್ವ
ಅನಾಗರೀಕತೆಗಿಲ್ಲ ಸಾಧುತ್ವ.

ನೆನಪುಗಳ ನೇವರಿಸುವಾಗ
ನೆಪಕ್ಕೆಂದಿಟ್ಟಿದ್ದ ವೀರ್ಯ.., ಸ್ಖಲನ,
ಮತ್ತೇಕೆ ಬೇಕು ವ್ಯವಕಲನ
ಗಂಡು ಹೆಣ್ಣು ಅಂದರೆ ಸಂಕಲನ. 

 
ಸುಡುಗಾಡು ಬೆಂಕಿಯಲಿ-
ಬೆಂದ ದೇಹದ ತಾಪ
ಹಸಿ ಹಸಿ ವಾಸನೆಗೆ

ಬೇಕಿತ್ತು ನೆಪ.

ವಿವೇಕಕ್ಕಿಲ್ಲ  ವಿಶ್ಲೇಷಣೆ
ಕಾಮಕ್ಕೆಲ್ಲಿಯದು ಕಣ್ಣು
ಮೈಭಾರ ತಗ್ಗಬೇಕು
ಬಿಸಿಯುಸಿರ ಬಸಿಯಬೇಕು.! 


ಕಾಮಾದಿ ಬಯಕೆಯಲಿ
ನಾಯಿ ಮುಟ್ಟಿದ ಮಡಿಕೆ;ಮನಸು
ತೊಗಲಾಚೆಗೀಚಿನ ವ್ಯಾಮೋಹ
ಜೀವಮಾನ ಹರಣಕ್ಕಾರಣ.

Thursday, November 8, 2012

--ಜ್ಯೋತಿಷ್ಯದ ತಮ್ಮಯ್ಯ--
-----------------------------

ನಾನು  ಹೈಸ್ಕೂಲಿನಲ್ಲಿ ಓದುತಿದ್ದಾಗ,   ಚಿತ್ರಕಲೆ ವಿಷಯದ
ಬಗ್ಗೆ ತಮ್ಮಯ್ಯ ಎಂಬುವರು ಬೋಧಕರಾಗಿದ್ದರು.  ಕೋತಿ ನಾಯಿ ಹಾವು ಕರಡಿ ಗುಲಾಬಿ ಗಣೇಶ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ಚನ್ನಾಗಿ ಬಿಡಿಸುತಿದ್ದರು.  ನಾವು ಸಹ ಅಷ್ಟೇ ಕಲಿತಿದ್ದು.   ಚಿತ್ರಕಲೆ ಪರೀಕ್ಷೆಗೆಂದು ಪಕ್ಕದ ಚನ್ನಪಟ್ಟಣಕ್ಕೆ ಹೋಗಿದ್ದೆವು.   ತಮ್ಮಯ್ಯನವರು ಹೇಳಿಕೊಟ್ಟಿದ ಯಾವೊಂದು  ಅಂಶವು ಪ್ರಶ್ನೆ ಪತ್ರಿಕೆಯಲ್ಲಿ ಕಾಣದೆ ಕಕ್ಕಾ- ಬಿಕ್ಕಿಯಾಗಿ,  ಅವರ ಮೇಲೆ ಕೋಪಗೊಂಡು ಅದೇ ಸಿಟ್ಟಿನಲ್ಲಿ ಪಕ್ಕದ ಚಲನ ಚಿತ್ರಮಂದಿರದಲ್ಲಿ ನಡೆಯುತಿದ್ದ ' ಅನುಭವ ' ಎಂಬ ಕುತೂಹಲಕಾರಿ ಸಿನೆಮಾ ನೋಡಿ ನಮ್ಮ ಕೋಪವನ್ನು ಸ್ವಲ್ಪ ಮಟ್ಟಿಗೆ ಶಮನ  ಮಾಡಿಕೊಂಡಿದ್ದು ಇನ್ನು ನೆನಪಿದೆ.     ತಮ್ಮಯ್ಯನವರ ಮತ್ತೊಂದು ಪಾರ್ಟ್ ಟೈಮ್ ಉದ್ಯೋಗವಿತ್ತು.  ಜ್ಯೋತಿಷ್ಯ ಹೇಳುವುದು.    ಅದನ್ನು ಕೇಳಿದವರಿಗೆ ಎಷ್ಟು ಲಾಭವಾಗಿತ್ತು ಎಂಬುದು ನನಗೆ ತಿಳಿಯದ ವಿಚಾರ.  ನಗರದಲ್ಲಿ ಯಾವುದಾದರು ಬಿಳಿ ಕಾಂಪೌಂಡ್  ಅವರ ಕಣ್ಣಿಗೆ ಬಿತ್ತೆಂದರೆ ಸಾಕು,  ಆ ರಾತ್ರಿಯೇ ಹೋಗಿ   ಆ ಗೋಡೆಯ ಮೇಲೆ,   '' ತಮ್ಮಯ್ಯನವರ  ಜ್ಯೋತಿಷ್ಯಾಲಯ'' ಮಾಟ-ಮಂತ್ರ, ವಶೀಕರಣ, ಧನಲಾಭ, ಆರೋಗ್ಯ ಇವುಗಳ ಬಗ್ಗೆ ಜ್ಯೋತಿಷ್ಯ ಹೇಳಲಾಗುವುದು.  ಒಮ್ಮೆ ಭೇಟಿ ಕೊಡಿ ಎಂದು ವಿಳಾಸ ಬರೆದಿರುತಿದ್ದರು.    ಮನೆಯ ಮಾಲೀಕರು ಬೆಳಿಗ್ಗೆ ಎದ್ದು ಗೋಡೆಯ ಮೇಲಿನ ಬರಹವನ್ನು ನೋಡಿ ಕೆಂಡಮಂಡಲವಾಗುತಿದ್ದರು.   ಮನೆಯ ಬಳಿ ಹೋಗಿ  ತಮ್ಮಯ್ಯನವರ ಕೊರಳ ಪಟ್ಟಿಯನ್ನು ಹಿಡಿದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ  ತಕ್ಷಣ ಅಷ್ಟೇ ಬೇಗ ತಣ್ಣಾಗಾಗುತಿದ್ದರು.   ಕಾರಣ.., ಕೆಂಪು ಬಣ್ಣದಿಂದ  ಬರೆದಿರುತ್ತಿದ್ದ  ಮಾಟ-ಮಂತ್ರ, ವಶೀಕರಣ ಎಂಬ ಪದಗಳು.      ಕೇಳುವುದಕ್ಕೆ ಹೋದರೆ ತಮಗೂ ಮಾಟ ಮಂತ್ರ ಮಾಡಿ ಬಿಟ್ಟಾರೆಂಬ  ಹೆದರಿಕೆಗೆ ಸುಮ್ಮನಾಗುತಿದ್ದರು.      ತಮ್ಮಯ್ಯನವರು ಜ್ಯೋತಿಷ್ಯ ಹೇಳುವುದಕ್ಕೆಂದು  ಪ್ರತ್ಯೇಕ ಜಾಗವನ್ನೇನು ಮಾಡಿರಲಿಲ್ಲ.   ಮನೆಯ ಒಂದು ಕೋಣೆಯನ್ನು ಭವಿಷ್ಯ ಹೇಳಲು ಮೀಸಲಾಗಿಟ್ಟಿದ್ದರು. 

ಹೀಗೆ ಜ್ಯೋತಿಷ್ಯ ಚಿತ್ರಕಲೆ ಎರಡರಲ್ಲೂ ತೊಡಗಿಸಿಕೊಂಡಿದ್ದ ತಮ್ಮಯ್ಯನವರು ಆ ಬೇಸಿಗೆ ರಜೆಯಲ್ಲಿ  ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡು ಬರಬೇಕೆಂದು ನಿರ್ಧರಿಸಿದವರೇ ಸಕುಟುಂಬ ಸಮೇತರಾಗಿ ಪ್ರವಾಸ ಹೊರಡಲು ದಿನಾಂಕವನ್ನು ನಿಗಧಿ ಮಾಡಿಕೊಂಡಿದ್ದರು.   ಅದೇ ಸಂದರ್ಭದಲ್ಲಿ ತಾನು ಪ್ರವಾಸ ಹೊರಟುಬಿಟ್ಟರೆ ಶಾಸ್ತ್ರ ಕೇಳಲು ಬರುವ ಜನರಿಗೆ ತೊಂದರೆಯಾಗುತ್ತದಲ್ಲ ಎಂಬ ಚಿಂತೆ ಸಹ ಕಾಡತೊಡಗಿತು.  ಆದರೆ ಹೆಂಡತಿ ಮಕ್ಕಳು ಪ್ರವಾಸ ಹೋಗಲೇ ಬೇಕೆಂದು ಹಠ ಹಿಡಿದ ಕಾರಣ  ಒಲ್ಲದ ಮನಸ್ಸಿನಿಂದ ಪ್ರವಾಸಕ್ಕೆ ಸಿದ್ಧರಾದರು.    ಪ್ರವಾಸ ಹೊರಡುವ ದಿನ ಮನೆಯ ಬಾಗಿಲಿಗೆ ಒಂದು ಬೋರ್ಡನ್ನು ಬೆರೆದು ತೂಗು ಹಾಕಿ ಹೊರಟರು.   ಅದರಲ್ಲಿ '' ಜ್ಯೋತಿಷ್ಯ ಶಾಸ್ತ್ರಜ್ಞ ತಮ್ಮಯ್ಯ ಹಾಗು ಕುಟುಂಬದವರು ಮೂರು ದಿನಗಳ ಕಾಲ ಪ್ರವಾಸ ಹೋಗಿರುವುದರಿಂದ, ಭಕ್ತರು ೩ ದಿನ ಬಿಟ್ಟು ಬರುವುದು.  ದಯವಿಟ್ಟು ಸಹಕರಿಸಿ '' ಎಂದು ಬರೆದಿತ್ತು...!

ತಮ್ಮಯ್ಯ ಮತ್ತು ಕುಟುಂಬದವರು ಧರ್ಮಸ್ಥಳ, ಹೊರನಾಡು, ಶೃಂಗೇರಿ, ಕೊಲ್ಲೂರು, ಕಳಶ, ಉಡುಪಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ಹಾಗು ಹೊರನಾಡು ಈ ಎಲ್ಲಾ  ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಯಾವುದೇ ತೊಂದರೆಯಿಲ್ಲದಂತೆ ಗುರುವಾರ ಹಿಂದಿರುಗಿದರು.  ತಮ್ಮ
ಯ್ಯ ಟ್ಯಾಕ್ಸಿಯಿಂದ ಇಳಿದವರೇ ಕೀ ತೆಗೆದುಕೊಂಡು ಡೋರ್ ಲಾಕಿನ ಹೊಳಗೆ ಹಾಕಿದರು ಅಷ್ಟೇ.  ಕೀಯನ್ನು ತಿರುವಲೇ  ಇಲ್ಲ.  ಬಾಗಿಲು ತಾನೇ ತಾನಾಗಿ ಹಿಂದೆ ಹೋಯಿತು.   ಒಳಗಿನ ದೃಶ್ಯ ನೋಡಿ ತಮ್ಮಯ್ಯನವರಿಗೆ ತಲೆ ತಿರುಗಿದಂತಾಯ್ತು.   ಹಿಂದೆಯೇ ಒಳ ಬಂದ ಹೆಂಡತಿ ಮಕ್ಕಳು ಅವಕ್ಕಾಗಿ ನಿಂತುಬಿಟ್ಟರು.  ಒಂದು ಕ್ಷಣ ಅವರಿಗೆಲ್ಲ ಬೇರೆ ಮನೆಗೆ ಬಂದಿದ್ದೇವೆಯೇ ಎಂಬ ಅನುಮಾನ ಕಾಡತೊಡಗಿತು.   ಆದರೆ ಬಾಗಿಲಿಗೆ ನೇತು ಹಾಕಿದ್ದ ಬೋರ್ಡು ಇದೇ  ತಮ್ಮಯ್ಯನವರ  ಮನೆಯೆಂದು ಸಾರಿ ಹೇಳುತ್ತಿತ್ತು. 

ನಡೆದದ್ದಿಷ್ಟೇ...., ತಮ್ಮಯ್ಯನವರು ಪ್ರವಾಸ ಹೋಗಿದ್ದಾಗ ಬಾಗಿಲಿಗೆ ನೇತು ಹಾಕಿದ್ದ  ಬೋರ್ಡು ದಾರಿಹೋಕರ ಗಮನ ಸೆಳೆಯುತ್ತಿತ್ತು. ಅದರಲ್ಲೂ ವಿಶೇಷವಾಗಿ  ಕಳ್ಳರ ಗಮನವನ್ನು ಸೆಳೆಯಿತು.   ತೊಂದರೆಯಿಲ್ಲದ ಅವಕಾಶ,  ಅಕ್ಕ-ಪಕ್ಕ ಯಾವುದೇ ಮನೆ ಸಹ ಇರಲಿಲ್ಲ.   ಮನೆಯವರು ಬರುವುದು ಇನ್ನು ಮೂರು ದಿನವಾಗುತ್ತದೆ ಎಂದು ಬಾಗಿಲಿಗೆ ತೂಗು ಹಾಕಿದ್ದ ಬೋರ್ಡು ಸಾರಿ ಸಾರಿ ಹೇಳುತಿದೆ.   ಕಳ್ಳರಿಗೆ ಖುಷಿಯೋ ಖುಷಿ.   ಕಳ್ಳರು ಹಗಲಿನಲ್ಲಿಯೇ ಒಂದು ಲಾರಿಯನ್ನು  ತಂದವರೇ ಕೆಟ್ಟುಹೋಗಿದೆ ಎಂಬಂತೆ ತಮ್ಮಯ್ಯನವರ ಮನೆ ಮುಂದೆ ನಿಲ್ಲಿಸಿ,  ಆ ರಸ್ತೆಯಲ್ಲಿ ಬೇರೆ ವಾಹನಗಳು ಬಾರದಂತೆ  ಕಲ್ಲನ್ನು ಅಡ್ಡ ಇಟ್ಟಿದ್ದರು.   ಆ  ದಾರಿಯಲ್ಲಿ ತಿರುಗಾಡುವವರು  ಲಾರಿ ಕೆಟ್ಟು ನಿಂತಿರಬೇಕೆಂದು ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದೆ ಹೋಗುತಿದ್ದರು.    ಕಳ್ಳರು ಮಧ್ಯರಾತ್ರಿಯಲ್ಲಿ ಬಂದವರೇ, ಜ್ಯೋತಿಷ್ಯದ ಕೋಣೆಯಲ್ಲಿದ್ದ ಸಾಮಾನುಗಳನ್ನು ಬಿಟ್ಟು, ಕಸ ಗುಡಿಸುವ ಪೊರಕೆ ಸಮೇತ  ಸಾವಾಕಾಶವಾಗಿ ಮನೆಯಲ್ಲಿದ್ದ ಎಲ್ಲಾವಸ್ತುಗಳನ್ನು ಕದ್ದು ಲಾರಿಯಲ್ಲಿ ಸಾಗಿಸಿದ್ದರು..............................., 

Sunday, November 4, 2012



ಗೆದ್ದಲು ಹುಳಗಳು
------------------------


ಪವರನೆಂಬ ದುರಹಂಕಾರಿಯ  ನಿರ್ಧಾರ 
ಹಸಿದೊಟ್ಟೆಗಳ ಮೇಲಿನ ಪ್ರಹಾರವಾಯ್ತು.
ದವಸ ಧಾನ್ಯಗಳ ತಿಂದುಂಡ ಹೆಗ್ಗಣಗಳು ದುಂಡಗಾದವು,
ಲೆಕ್ಕಕ್ಕೆ ಸಿಗದ ದವಸ ಮಣ್ಣಾಯ್ತು.
ಪಶ್ಚಾತಾಪದ ಕುರುಹು ಇವನಿಗಿಲ್ಲವಾಯ್ತು.

ತರಂಗಾಂತರಂಗ ಹೊಕ್ಕ ಕೀರೀಟವಿಲ್ಲದ ರಾಜ
ಒಂದೇ ಕಿಕ್ಕಿಗೆ ಭೋಜನವುಂಡ ಕವಿಯತ್ರಿ
ದುರಾಸೆ ಮುಂದಾಗಿ ಜೈಲುಪಾಲಾದರು.

ಕ್ರೀಡೆಗೂ ಗ್ರಹಣ ಬಡಿಸುವ ಕಲೆಗಾರ ಕಲ್ಮಾಡಿ
ಅಂಡೊರೆಸುವ
ಕಾಗದಕ್ಕೂ
ಕೋಟಿ ಕೋಟಿ ಬಾಚಿದ್ದು ಇವನ ಜೀವಮಾನ ಸಾಧನೆ
ಬಿಡುಗಡೆಯಾದಮೇಲೆ ಕೊಂಡಾಡಿದ್ದು ಆ ಪಕ್ಷದ ಮಹತ್ಸಾದನೆ.

ಸಿಂಗ್ ಕಿಂಗ್ ಆದಿಯಾಗಿ ಕಲ್ಲಿದ್ದಲ ಕಪ್ಪಲ್ಲಿ ಮುಖತೊಳೆದು

ಏನು ಆಗಿಲ್ಲವೆಂದು ತಿಪ್ಪೆಸಾರಿಸಿ, ಕನ್ನಡಿ ಹಿಂದೆ ನಿಂತುಬಿಟ್ಟವರು
ಮೂರು ಬಿಟ್ಟದ್ದು ಎಲ್ಲರಿಗು ತಿಳಿದಿಲ್ಲವೆಂದು ಮುಸಿ ಮುಸಿ ನಕ್ಕಿದ್ದು
ಕಾಂಗ್ರೇಸ್ ಗಿಡದಷ್ಟೇ ಸತ್ಯ. 

ಗಡಾರಿ ಹಿಡಿದ ಗಡ್ಕರಿ
ಪ್ರಹಾರ ಮಾಡಿದ್ದು ಯಾವ ಪರಿ
ಆಳುವವನ ಹಿಡಿದು ಉಳುವವನ
ಹೆಡೆಮುರಿ ಕಟ್ಟಿ ಆದನು ಸಿರಿ-
ವಂತ.  ಇಂಗು ತಿಂದ ನಿ-ತಿನ್
ಮಂಗನಂತಾದವರು ಸ್ವಯಂ ಸೇವಕರು. 

ರಾಷ್ಟದಳಿಯ ಮನೆತೊಳಿಯ
ಅವನೊಬ್ಬ ವಾದ್ರಾ..,
ಕೆಲಸ  ಸೊನ್ನೆ.  ಅರ್ಹತೆ ಪ್ರಿಯಳ ಅಂಕ
ಅತ್ತೆಯ ನೆರಳು.  ಡಿ ಎಲ್ ಎಪ್ ಇವಗೆ ಮರುಳು.
ಬಹುಪರಾಕ್ ಮಂದಿ ತಾರಿಸುತಿಹರು ತಿಪ್ಪೆ  

ರಾಷ್ಟ್ರಸೇವಕರಿಗೆಂದಿದ್ದ ಸೂರ
ಸೂರೆಗೊಂಡರನೇಕರು. ಲಜ್ಜೆಯಿಲ್ಲದ ಮಂದಿ
ಮಂಡಿಯೂರಿ ನೆಕ್ಕಿಹರು ಇಟಾಲಿಯನ್ನಿನ ಚಪ್ಪಲಿ. 
ಅಭಯ ಹಸ್ತ ದೊರಕಿ, ನಗುತಿಹರು ಪ್ರೇತದಂತೆ. 

ನೈಸಾಗಲಿಲ್ಲ  ರಸ್ತೆ.  ವೈನಾದರು ತಿಂದುಂಡವರೆಲ್ಲ.

ಕಣಿ ಹೇಳುವಂತೆ ಕಾಣ್ವ ಖೇಣಿ .
ಹರಳೆಣ್ಣೆ ಕುಡಿದಂತ ಗೌಡ.
ಸಿಡುಕು ಮೊರೆ ಸುಬ್ಬನೆಂಬ ಅಡ್ಡಾದಿಡ್ಡಿ
ವಿಗ್ಗಿನಡಿಯಲ್ಲಿ ಕೆಲಸ ಮುಗಿಸಿದ ಚತು-
ರ.  ಕರೆದರಡ್ಡಿಯಿಲ್ಲ ಇವ ಕುಟಿಲ ಕೃಷ್ಣಯ್ಯ.

ಕರುನಾಡ ಮುಷ್ಠಿಯಲಿಡಿದು
ಪುರಜನರ ಕಾಲಡಿಯಿಕ್ಕಿ 
ಮಣ್ಣನ್ನೇ ಹೊನ್ನಾಗಿಸಿ ಮೆರೆದು
ಗಾಲಿಯನೇರಿದ ಜನಾರ್ಧನನೀಗ
ಕಂಬಿಯ ಹಿಂದೆ ಕಂಬಿನಿ ನುಂಗುತ
ಹುಸಿನಗೆ ಬೀರುತಿಹನು. 

ಹುದ್ದೆಯ ಜಿದ್ದಿಗೆ ಬಿದ್ದು
ಟೊಂಕಕಟ್ಟಿ ದುಡಿದು
ಅಧಿಕಾರಕ್ಕೇರಿ, ದೋಚಿ-ಬಾಚಿ
ಕೊನೆಗಾಯ್ತು  ಯಡ್ಡಿಯ ಅವಸಾನ. 

Thursday, August 23, 2012

'' ಖಾಲಿ ಪುಟದ ಕವನ '' --------


ಖಾಲಿ ತಲೆ ಖಾಲಿ

ಇತ್ತೀಚಿನ ಖಯಾಲಿ,
ಬೆರಳಿಗಂಟಿದ ಶಾಯಿ
ಮೂಡಿಸದೆ ಅಕ್ಷರ
ಹಾಳೆ ಖಾಲಿ ಹಾಳೆ.

ಧೃತಿಗೆಡಲಿಲ್ಲ, ಗೀಚಿದೆ  

ತೋಚದೆ ಸುಮ್ಮನೆ;
ಭೀಷಣ ಪಾಷಾಣ
ಮೆತ್ತಿದ ಪಾಖಂಡಿ
ಮನಸುಗಳಲಿ
ಮಂದಿರ ಮಸೀದಿ
ಚರ್ಚ್ ಎಂಬ-
ನಡುಮನೆಯ ಅಪೀಮು,
ನೆತ್ತಿಗಡರಿ
ನರನಾಡಿಗಳೆಲ್ಲ ನಂಜಾದವು
ಕಣ್ಣು  ಕೆಂಪಾಗಿ
ರಕ್ತ ಕಪ್ಪಾಯಿತು,

ಭಾವ ಬಂಜೆಯಂತಾಗಿ

ಭ್ರಾಮಕ ಉಸಿರಾಗಿ
ಬಸಿರಾಗಲಿಲ್ಲ ಭ್ರಾತೃತ್ವ.
ಇನ್ನೆಲ್ಲಿ ಹೆರಿಗೆ ಬೇನೆ...!!

ಛೇ..! ಈ
ಗೊಡ್ಡು ಭ್ರಾಂತು
ಪಥ್ಯವಿಲ್ಲದ ರೋಗ.
ಇದೆಲ್ಲ..,
ಕಸದ ತೊಟ್ಟಿಯಲ್ಲಿ
ಗೊಬ್ಬರವಾಗುವ ವಿಷಯ.
ಯಾರಿಗೂ ಬೇಡದ
ಕಾಡದ ಸಂಗತಿ
ನನಗೇಕೆ ಬೇಕು...?
ಅರ್ಬುದ ರೋಗ
ಕಾಲಿನ ಬುಡದ ಸತ್ಯ
ನಿರ್ಲಕ್ಷಿಸಿದರೆ
ಆಪತ್ತು ಬಂದು ಚಾಪೆಯಲ್ಲಿ
ಸುತ್ತೊಯ್ವುದು, ಕೇಳದೆ..!

ಇಲ್ಲಾ...,  ಕವನವಾಗಲಿಲ್ಲ

ಪದಗಳ ಬೆಸುಗೆ
ಸರಿಹೋಗಲಿಲ್ಲ..,
ಬರೆದದ್ದನ್ನೆಲ್ಲ ಹರಿದು
ಮೊದಲಿಗೆ ಬಂದೆ
ಮತ್ತದೇ ಶೂನ್ಯ ....

ಖಾಲಿ ತಲೆ

ದೆವ್ವದ ನೆಲೆ,
ಈ ಸತ್ಯದ ಉಕ್ತಿಗೆ 
ಹೊಸತೊಂದು ಪುಟ
ಸೇರ್ಪಡೆ..!
ಇದುವೇ ನನ್ನ
ಖಾಲಿ ಪುಟದ ಕವನ...!!

Thursday, June 28, 2012

---- ಕಾಲಾಯ ತಸ್ಮೈ ನಮಃ ---



'' ಎಂಥಾ ಮಗು, ಗಂಡು ತಾನೆ '' .?!!
ಇಲ್ಲ .., ಹೆಣ್ಣು ಮಗು...!
ಛೇ., ಸಾಮ್ರಾಜ್ಯ ಪಥನದ ಮುನ್ಸೂಚನೆ..!
ಗೋಡೆ ಮೇಲಿನ ಗೌಳಿ ಲೋಚಗುಟ್ಟುತ್ತಿತ್ತು
ಆದರೇನಂತೆ,
ಮುಂದಾದವು....,
ತನ್ನ ಪೌರುಷದ ಮೇಲಿನ ನಂಬಿಕೆಗೆ,
ಒಂದಲ್ಲ ಎರಡು ಗಂಡು ಮಕ್ಕಳು.
ಬಿತ್ತನೆ ಬೀಜಗಳಂತೆ
ವಂಶಾವಾಹಿನಿಯ  ತಳಿಗಳವು
ದೊಡ್ಡವ ಅಪ್ಪನಿಗೆ; ಕಿರಿಯವ ಅವ್ವನಿಗೆ
ತಲೆ ಬೋಳಿಸಿಕೊಂಡು ಕೊಳ್ಳಿ ಹಿಡಿಯುವುದಕ್ಕೆ,
ಜೊತೆಗೊಂದಿಷ್ಟು ಪಿಂಡ ಹಾಕುವುದಕ್ಕೆ..,
ಸುತ್ತಿ ಬಳಸುವುದಿಲ್ಲ, ಸ್ವರ್ಗಕ್ಕೆ ನೇರದಾರಿ
ತೋರಿಸುವ ಕುಲೋದ್ಧಾರಕರು.
ಕೀರ್ತಿಪತಾಕೆ ಹಾರಿಸುವ ಕೀರ್ತಿವಂತರು.
ನೆಲ ಕಾಣುತಿದ್ದ ಗೌಡನ ಮೀಸೆ ಆಕಾಶ ನೋಡುತ್ತಿತ್ತು. 

ಅದೊಂದು ದಿನ....

ನನ್ನ ಅಸ್ಥಿಯ ಬೂದಿ-
ಯನ್ನು  ನದಿಯಲ್ಲಿ ವಿಸರ್ಜಿಸಿರೆಂದು
ಜೀರ್ಣಾವಸ್ಥೆಯಲ್ಲಿಯೇ ಕಣ್ಮುಚ್ಚಿದ ಅಪ್ಪ.
ಆಶ್ಚರ್ಯ..! ಸಗ್ಗದ ದಾರಿ ಮುಚ್ಚಿದೆ..!
ಇಲ್ಲೇಕೆ ಬಂದಿರಿ...... ಕಿಂಕರರ ಪ್ರಶ್ನೆ..?
ಮಣ್ಣಾದ ಮೇಲೆ ಮತ್ತೇನು ಕಿರಿಕಿರಿ
ಅಪ್ಪನ ಮರು ಪ್ರಶ್ನೆ.
ಮುಕ್ತಿ ಇಲ್ಲದವರಿಗೆಂದೇ  ಇದೇ
ತ್ರಿಶಂಕೂ ಸ್ವರ್ಗ, ಹೋಗೆಂಬ ಉತ್ತರ. 
ಅಯೋಮಯನಾದ ಅಪ್ಪಾ..
ತೊರೆದುಬಂದ ದೇಹದೆಡೆಗೆ ಮತ್ತೆ ಬಂದ. 
ಮುಡಿತುಂಬಾ ಹೂ ಮುಡಿದು, ಕೈತುಂಬಾ ಬಳೆ-
ತೊಟ್ಟ ಹೆಣ್ಣಿನ ಬತ್ತಿದ ಕಣ್ಣೀರ ಜೊತೆಗೆ
ಗೌಜು ಗದ್ದಲ ಏರುದನಿಗಳ  ಮೇಲಾಟ.
ನಡುವೆ.....,
ಅನಾಥವಾಗಿ ಬಿದ್ದಿರುವ ತನ್ನ ದೇಹ.
ಮತ್ತಷ್ಟು ಸನಿಹಕ್ಕೆ ಸರಿದು ಬಂದ
ಸಮಭಾಗ ಸಿಗುವವರೆಗೂ ಹೆಣ ಸುಡಲು
ಬಿಡನೆಂಬ ಮಗನೊಬ್ಬ,
ಮರಣಶಾಸನವಿದೆ ಬೇಕಾದ್ದು ಮಾಡಿಕೊ
ಎನ್ನುವ ಮತ್ತೊಬ್ಬ.  ಹರಿಶಿಣ-
ಕುಂಕುಮಕ್ಕೆ ನನಗೆಲ್ಲಿದೆ ಎಂಬ ಮಗಳು. 
ಇದನ್ನೆಲ್ಲಾ ನೋಡಿದ ಅಪ್ಪ,  ಬಂದಷ್ಟೇ
ವೇಗವಾಗಿ ಹಿಂದಿರುಗಿ  ಹೊರಟ,
ಇವರನ್ನು ಹೆತ್ತ ತಪ್ಪಿಗೆ
ನರಕದ ಬಾಗಿಲಾದರು  ತೆರೆದಿರಬಹುದೆಂಬ
ಆಶಾಭಾವನೆಯಿಂದ...!!

Saturday, June 16, 2012

------ಋತುಮಾನ -------




ಮೊಗ್ಗು ಮೈನೆರೆದಾಗಿನ 
ಬದಲಾದ  ಮೈಯ ಬಿಸುಪು, 
ಮಾದಕತೆ ಮೈತಾಕಿ, 
ಕುತೂಹಲವಾಯ್ತು ಇಮ್ಮಡಿ.
ವಿಸ್ಮಯವಿಲ್ಲಿ ವಿಹಿತ,
ಅದು ಬರೀ ಬೆರಗಲ್ಲ.!
ಅಡಿಯಿಂದ ಮುಡಿಯವರೆಗಿನ ಅಚ್ಚರಿ.!! 
ಅಂಕು ಡೊಂಕಿನ ದಾರಿ
ಇಕ್ಕೆಲಗಳಲ್ಲಿ ಹಸಿರು ತುಂಬಿ, 
ಮಾಘದಲ್ಲಿ  ತೂಗಿ  ಬಾಗೋ   
ವಯ್ಯಾರದ ಪ್ರಕೃತಿ ಸೊಬಗ,
ಉಬ್ಬು ತಗ್ಗುಗಳ ಕಣಿವೆಯಲ್ಲಿ 

ಕಳೆದುಹೋದ ಕ್ಷಣದಲಿ, 
ಸ್ತಂಭಿಸಿದ ಬೀಸು ಗಾಳಿಯ 
ನಡುವೆ,  ಸೌಸವದ ಬೆವರು.!
ಘನೀಭವಿಸಿದ ಮೋಡ.
ಹನಿಯಾಗಿ ಸ್ಖಲಿಸುವ ಮುಂಚಿ-
ನಲಿ, ಗುಡುಗು ಮಿಂಚಿನಾರ್ಭಟ
ಸೋನೆ ಮಳೆಗೆ
ಮನ ತಣಿದ  ಇಳೆಯಂತೆ.
ಸ್ವಾದದ ಅನುಭೂತಿ 
ಸಂತೃಪ್ತಿಯ,  ಬೆನ್ನಿಗಂಟಿದ 
ಸೃಷ್ಟಿಯ ರಹಸ್ಯ.!  
ಪ್ರಕೃತಿಯ ಸಮ್ಮಿಲನದಿ   
ಬೆತ್ತಲು ಬಯಲು,
ಹೊಸ ದೃಷ್ಟಿಯ ಉಗಮ.  

Monday, May 28, 2012

-- '' ನನ್ನೀ ಪ್ರಣತಿ '' --

ಈ ಸಂಜೆಗತ್ತಲ  ತಂಪಿಂದು
ಸುಡುಕೆಂಡ  ಈ ಹೃದಯಕೆ,
ತೆರೆಸರಿಸಿ ಹೊರಚಾಚಿ
ಸಿಹಿನೆನಕೆ ಕಣ್ಣೀರಂತೆ ಒಸರಿ
ಜಿಗುಟಾಯ್ತು ಭಾವ.

ಹಿಡಿಯಷ್ಟು ಪ್ರೀತಿ
ಹೊರಲಾರದಷ್ಟು ಭಾರ
ಪಿಸುಮಾತಿನ ಲಹರಿ
ಬಿಸಿಯುಸಿರಲು ತಂಪೆನಿಸುವ ಪದೆಪು,
ಪ್ರಮೋದದಿ ಇದೋ ನನ್ನೀ ಪ್ರಣತಿ.

ಬಚ್ಚಿಟ್ಟ ಬಯಕೆಯ ಕಾಮವಲ್ಲ
ಬೆಚ್ಚನೆಯ ಹೊದಿಕೆಯಲಿ
ಮಡಿಚಿಟ್ಟ ಪ್ರೇಮ ನಮ್ಮದು
ಅವಳ ಕಣ್ಣೊಳಗಿನ ಬಿಂಬ ನಾನು 
ಮರೆತು ಕಣ್ಣ ಹನಿ ಜಾರಿಸಲವಳು.

ಕಾಯುವೆನು.....,
ಕಾಯುತಲೇ ಕಾಲನ 
ಅಪ್ಪಿದರು ಸರಿಯೇ....,
ಒಪ್ಪಿಸಿಕೊಂಡ ಹೃದಯವನು 
ಮತ್ತೆ ಕೇಳನೆಂದು...!!

ಹಳೆ ನೆನಪಿನ 
ಹೊಸ ಭಾಷ್ಯ 
ಬರೆದಿಡುವೆ ನಲ್ಲೆಗಾಗಿ 
ಮುಂದೊಂದು ದಿನ 
ಹೊರಬರಲಿ   ಕವಿತೆಯಾಗಿ...!!

Thursday, May 24, 2012

'' ಪ್ರತೀಕ್ಷೆ ''


ಯಮುನೆ ಹರಿಯುತಿದ್ದಾಳೆ 
ನಿಶ್ಯಬ್ದವಾಗಿ, 
ಬಳುಕಿ  ಹರಿಯುವ ಲಾಸ್ಯವಿಲ್ಲ...,
ಕಲರವ ಕೊರಗಾಗಿದೆ.

ದಡದ ಮೇಲಿನ ಕದಂಬ ಮರ 
ಕದಲದೆ ನಿಂತಿದೆ, 
ಸೂಸದೆ ಪರಿಮಳವ 
ಮೋಹನ ಕೊಟ್ಟ ಮಾತಿಗೆ ಸಾಕ್ಷಿಯಾಗಿ,


ಬೆಳದಿಂಗಳು ಮಂಕಾಗಿದೆ 
ಬೇಗೆಯಿಂದ, 
ರಾಧೆಯ ಹೃದಯದಿ ಅರಳಿದ  ಪ್ರೀತಿಗೆ
ಕಾರಣ ನಾನಾದೆನೆಂದು....!  

ಹಣತೆ ಹಚ್ಚಿಟ್ಟು ಕಾಯುತಿಹಳು ರಾಧೆ
ಮೋಹನನಿಗಾಗಿ, 
ಕಣ್ಣೀರ ಹನಿ ಹೊಳೆಯಾಗಿ ಹರಿಸಿ 
ವಿರಹದಿಂದ....,

ಅದೆಷ್ಟೋ ಹುಣ್ಣಿಮೆ ಬಂದವು 
ಕರಗಿ ಹೋದವು ಕಾರಿರುಳಲ್ಲಿ 
ಮುರಳಿ ಮೋಹನ ಮಾತುಕೊಟ್ಟಿದ್ದಾನೆ
 '' ಬಂದೇ ಬರುತ್ತೇನೆಂದು ''
ಯಾರಾದರು ಕಂಡಿರ, ಗೋಪಾಲನ....?
ರಾಧೆ ಈಗಲೂ ಕಾಯುತಿಹಳು 
ನೋಡಿರಲ್ಲಿ....,  ಕದಂಬದ ಮರಕ್ಕೊರಗಿ  ಕುಳಿತಿಹಳು.....!!

Tuesday, May 22, 2012

ಮೇಘ ಸಂದೇಶ......


ದೂರ ದೂರಕೆ ತೇಲಿ ಸಾಗುತಿರುವ ಮೋಡಗಳೇ....,
ನನ್ನ ವಿನಂತಿಯನ್ನೊಮ್ಮೆ ಆಲಿಸಿ ಮುಂದೆ ಸಾಗಲಾರಿರ....?
ತಡೆದು ನಿಲ್ಲಿಸಿದ್ದಕ್ಕೆ ಕ್ಷಮೆಯಿರಲಿ.....,

ನನ್ನವಳು, 
ಬಾನಲ್ಲಿ ಹೊಳೆವ ನಕ್ಷತ್ರವಾಗಿದ್ದಳು 
ಅದೇಕೊ...! ಈ ನಡುವೆ ಮಿನುಗಲು ಮರೆತಂತಿಹಳು 
ಕರಿಮುಗಿಲಲ್ಲಿ  ಮಿಂಚುವ ಮಿಸುನಿಯಂತಿದ್ದಳು 
ಆದರೀಗ  ಕನಸಿಗೂ ಬರಲಾರದಷ್ಟು ಬದಲಾಗಿಹಳು 

ಈ ನನ್ನ ಮನಸನ್ನು ಮರೆತು ಇರುಳಲ್ಲಿ  ಕಳೆ-
ದು ಹೋದ ಬೆಳದಿಂಗಳ ಬಾಲೆ...., ಅವಳು...!
ನನ್ನೀ ದೇಹವೆಂಬ ಕೊರಡು ಇಲ್ಲಿದೆ 
ಹೃದಯ ಮಾತ್ರ ಅವಳಲ್ಲಿದೆ...! 
ಇನ್ನು ಕಾಯುವ ತಾಳ್ಮೆ  ನನಗಿಲ್ಲ...,

ನೀವು ಸಾಗುವ ಹಾದಿಯಲ್ಲಿ ನನ್ನ 
ತಾರೆಯನ್ನೇನಾದರು ಕಂಡರೆ...
ಕನಿಕರಿಸಿ ಅರುಹಿಬಿಡಿ,
'' ಅಲ್ಲಿ ಕನಸೊಂದು ಕಾಯುತಿದೆ ನಿನಗಾಗಿ 
  ನೀ ಇನ್ನೂ   ಕಾಣದಾದರೆ ಅವನ ಸಾವು ನಿನಗಾಗಿ '' 
ಎನ್ನುತ ಮುಂದೆ ಸಾಗಿ ಹೋಗಿ ಬಂಧುಗಳೇ.....





Monday, May 21, 2012

ನನ್ನವಳು....

ಒಮ್ಮೊಮ್ಮೆ ಬೆಳ್ಳಂ ಬೆಳಿಗ್ಗೆ 
ಮಗದೊಮ್ಮೆ  ಇರುಳು ಕವಿದರೆ ಸಾಕು 
ಮುತ್ತುವವು ಮೊಲದ ಹಿಂಡಂತೆ...,
ಹೊಸ ಬಣ್ಣ ಬಳಿದಂತಹ ಕನಸುಗಳು 

ಅವಳ ಕನಸಿಗೆ ನಾನು ಲಗ್ಗೆ-
ಯಿಡುತ್ತೇನೋ ಇಲ್ಲವೋ ಗೊತ್ತಿಲ್ಲ 
ಅವಳು ಮಾತ್ರ ಕಾಡಿಬಿಡುವಳು
ನನ್ನೆಲ್ಲ ಕನಸುಗಳಲ್ಲೂ....!

ಕಣ್ಣರೆಪ್ಪೆಯ ಹಿಂದಿನ ಹಾಡಾಗುವಳು
ಇವಳು...., ನಾ ಬಯಸಿದಾಗಲೆಲ್ಲ 
ಗುನುಗುನುಗಿ ಮಾಯವಾಗುವ
ಜಿಂಕೆಯಂತವಳು...., ನಾ 
ಕಣ್ಣುಬಿಟ್ಟೊಡನೆ ಎದಿರಲ್ಲೇ 
ಹಾಜರಾಗುವಳು.....!

ಮುಂಗುರಳನು ಹಿಂದಕ್ಕೆ ತಳ್ಳಿ 
ಹಣೆಯ ಮೇಲೊಂದು ಹೂ ಮುತ್ತನ್ನಿತ್ತು 
ಬಿಸಿ ಬಿಸಿ ಸುವಾಸನೆಯ ಕಾಫಿ-
ಯೊಂದಿಗೆ ಬೆಳಗಾಗುವಳು 
ಆ ದಿನವೆಲ್ಲ ಬೆಳಕಾಗುವಳು 
ಇವಳು ನನ್ನವಳು....,

Sunday, May 20, 2012

-------ಅರ್ಪಣೆ------


ತನುವನ್ನೇ ಬಸಿದು
ಶೇಖರಿಸಿಟ್ಟ ಮಕರಂದವನು....!

ಬಂದ ದುಂಬಿಯೊಂದು
ಹನಿ ಬಿಡದೆ ಹೀರಿದರೂ....!

ತನ್ನೊಲವು ಅರ್ಪಿತವಾಯ್ತೆಂದು
ಧನ್ಯವಾಯ್ತು
ಹೂ
ಅರ್ಪಣೆಯಲ್ಲಿ...!! 
( ಹಿಂದೊಮ್ಮೆ ಬರೆದಿದ್ದೆ ಅದನ್ನೇ ತಿದ್ದಿ ಬರೆದಿದ್ದೇನೆ.)

Sunday, May 13, 2012

==== ಭಾವತೀರಯಾನ===



ನಸುನಾಚಿ ಭಾವ 
ಮುಖದಲ್ಲಿ ಹರಡಿ 
ಕೋಲ್ಮಿಂಚು ತುಟಿಯಂಚಲಿ...,
ಇಬ್ಬನಿಯಲಿ ತೋಯ್ದು 
ಬೆಳಗಿನಲಿ ಅರಳಿದ 
ನಗೆ ಮೊಲ್ಲೆ ನೀನು. 

ಎಸಳಿನ ಮೇಲೆ ಬಿದ್ದ 
ಹಿಮ ಬಿಂದು ನೀನೆಂದು 
ಚಪ್ಪರಿಸೆ  ನಾನು...!
ಹನಿಯಾಯ್ತು ಸ್ವಾತಿ ಮುತ್ತು...!!
ಪ್ರತಿ ಜಿನುಗು ಸವಿ ಒರೆತ 
ಪ್ರೇಮದದ್ಭುತ ಭಾವ...!
ತನುವಾಯ್ತು ಪ್ರೀತಿ ಹೀರಿ 
ಸಮ್ಮೋಹದಾನಂದ ಚಂದ..,

ಬೆಳಕಿನೊಳಗಿನ ತೇಜ 
ಬೀರದಿರಲಿಂದು ಉರಿಗಣ್ಣ...! 
ಬೆಳಕ ಹೀರಿ ತಂಪ ಪ್ರತಿಪಲಿಸೋ 
ಚಂದಿರ ನನಗಿಂದು ಅಣ್ಣ...!
ನಲುಗದಿರಲಿ ನಗುವು 
ಮುಡಿಪಾಗಿರಲಿ ಒಲವು 
ಒಪ್ಪಿಕೊಂಡ ಮೇಲೆ 
ಅಪ್ಪಿಕೊಂಡ ಹೃದಯವ 
ಬಿಡಲಾರೆನೆಂದೆಂದು ನಂಬು ನನ್ನೊಲವೇ......
( ಪ್ರೀತಿಯಿಂದ  ಸತೀಶ್ ರಾಮನಗರ )


Wednesday, May 9, 2012

ಹಾಗೆ ಸುಮ್ಮನೆ....(ನಗೆ ಮಲ್ಲಿಗೆ)


ಹೆಂಡತಿ---
ಏನ್ರೀ...., ಪಕ್ಕದ್ದ್ ಮನೆ ಪದ್ದುನ ಹಾಗ್ 
ನೋಡ್ತಾಯಿದ್ದೀರ ....?


ಗಂಡ---
ನೆನ್ನೆ ರಾತ್ರಿ ಆಕೆ ನನ್ನ ಕನಸಲ್ಲಿ ಬಂದಂಗಿತ್ತು. 
ಅದು ಪದ್ದುನ ಇಲ್ಲಾ ಆಚೆ ಮನೆ ನೀಲುನಾ
ಎಂದು ನೋಡ್ತಿದ್ದೆ ಕಣೆ.  

ಹೆಂಡತಿ---
ಹಾಗಾ......!!!
ನನಗೂ ನೆನ್ನೆ ರಾತ್ರಿ ಒಂದು ಕನಸು ಬಿತ್ತು ಕಣ್ರೀ,  ಅದ್ರಲ್ಲಿ ಪದ್ದು ಗಂಡ ಬಂದಿದ್ದ್ರು.....!!!
ಬಂದು ಏನ್ ಮಾಡಿದ್ರು ಗೊತ್ತಾ......?

ಗಂಡ---
ಆ.... ಹೌದೇನೆ....!!
ಬಂದು ಏನೇ ಮಾಡಿದ...!!

ಹೆಂಡತಿ--- 
ನಿನ್ನ ಗಂಡ ಇತ್ತೀಚೆಗೆ ನನ್ನ ಮನೆ ಕಡೇನೆ ನೋಡ್ತಿರ್ತಾನೆ 
ಹುಷಾರಾಗಿರೋಕೆ ಹೇಳು.  
ಇಲ್ಲಾ ಅಂದ್ರೆ ಅವನ್ ಕಣ್ಣ ಕಿತ್ತಾಕ್ ಬಿಡ್ತೀನಿ  ಅಂದ್ರು ಕಣ್ರೀ...:)))))