ಗೆದ್ದಲು ಹುಳಗಳು
------------------------
ಪವರನೆಂಬ ದುರಹಂಕಾರಿಯ ನಿರ್ಧಾರ
ದವಸ ಧಾನ್ಯಗಳ ತಿಂದುಂಡ ಹೆಗ್ಗಣಗಳು ದುಂಡಗಾದವು,
ಲೆಕ್ಕಕ್ಕೆ ಸಿಗದ ದವಸ ಮಣ್ಣಾಯ್ತು.
ಪಶ್ಚಾತಾಪದ ಕುರುಹು ಇವನಿಗಿಲ್ಲವಾಯ್ತು.
ತರಂಗಾಂತರಂಗ ಹೊಕ್ಕ ಕೀರೀಟವಿಲ್ಲದ ರಾಜ
ಒಂದೇ ಕಿಕ್ಕಿಗೆ ಭೋಜನವುಂಡ ಕವಿಯತ್ರಿ
ದುರಾಸೆ ಮುಂದಾಗಿ ಜೈಲುಪಾಲಾದರು.
ಕ್ರೀಡೆಗೂ ಗ್ರಹಣ ಬಡಿಸುವ ಕಲೆಗಾರ ಕಲ್ಮಾಡಿ
ಅಂಡೊರೆಸುವ ಕಾಗದಕ್ಕೂ
ಕೋಟಿ ಕೋಟಿ ಬಾಚಿದ್ದು ಇವನ ಜೀವಮಾನ ಸಾಧನೆ
ಬಿಡುಗಡೆಯಾದಮೇಲೆ ಕೊಂಡಾಡಿದ್ದು ಆ ಪಕ್ಷದ ಮಹತ್ಸಾದನೆ.
ಸಿಂಗ್ ಕಿಂಗ್ ಆದಿಯಾಗಿ ಕಲ್ಲಿದ್ದಲ ಕಪ್ಪಲ್ಲಿ ಮುಖತೊಳೆದು
ಏನು ಆಗಿಲ್ಲವೆಂದು ತಿಪ್ಪೆಸಾರಿಸಿ, ಕನ್ನಡಿ ಹಿಂದೆ ನಿಂತುಬಿಟ್ಟವರು
ಮೂರು ಬಿಟ್ಟದ್ದು ಎಲ್ಲರಿಗು ತಿಳಿದಿಲ್ಲವೆಂದು ಮುಸಿ ಮುಸಿ ನಕ್ಕಿದ್ದು
ಕಾಂಗ್ರೇಸ್ ಗಿಡದಷ್ಟೇ ಸತ್ಯ.
ಗಡಾರಿ ಹಿಡಿದ ಗಡ್ಕರಿ
ಪ್ರಹಾರ ಮಾಡಿದ್ದು ಯಾವ ಪರಿ
ಆಳುವವನ ಹಿಡಿದು ಉಳುವವನ
ಹೆಡೆಮುರಿ ಕಟ್ಟಿ ಆದನು ಸಿರಿ-
ವಂತ. ಇಂಗು ತಿಂದ ನಿ-ತಿನ್
ಮಂಗನಂತಾದವರು ಸ್ವಯಂ ಸೇವಕರು.
ರಾಷ್ಟದಳಿಯ ಮನೆತೊಳಿಯ
ಅವನೊಬ್ಬ ವಾದ್ರಾ..,
ಕೆಲಸ ಸೊನ್ನೆ. ಅರ್ಹತೆ ಪ್ರಿಯಳ ಅಂಕ
ಅತ್ತೆಯ ನೆರಳು. ಡಿ ಎಲ್ ಎಪ್ ಇವಗೆ ಮರುಳು.
ಬಹುಪರಾಕ್ ಮಂದಿ ತಾರಿಸುತಿಹರು ತಿಪ್ಪೆ
ರಾಷ್ಟ್ರಸೇವಕರಿಗೆಂದಿದ್ದ ಸೂರ
ಸೂರೆಗೊಂಡರನೇಕರು. ಲಜ್ಜೆಯಿಲ್ಲದ ಮಂದಿ
ಮಂಡಿಯೂರಿ ನೆಕ್ಕಿಹರು ಇಟಾಲಿಯನ್ನಿನ ಚಪ್ಪಲಿ.
ಅಭಯ ಹಸ್ತ ದೊರಕಿ, ನಗುತಿಹರು ಪ್ರೇತದಂತೆ.
ನೈಸಾಗಲಿಲ್ಲ ರಸ್ತೆ. ವೈನಾದರು ತಿಂದುಂಡವರೆಲ್ಲ.
ಕಣಿ ಹೇಳುವಂತೆ ಕಾಣ್ವ ಖೇಣಿ .
ಹರಳೆಣ್ಣೆ ಕುಡಿದಂತ ಗೌಡ.
ಸಿಡುಕು ಮೊರೆ ಸುಬ್ಬನೆಂಬ ಅಡ್ಡಾದಿಡ್ಡಿ
ವಿಗ್ಗಿನಡಿಯಲ್ಲಿ ಕೆಲಸ ಮುಗಿಸಿದ ಚತು-
ರ. ಕರೆದರಡ್ಡಿಯಿಲ್ಲ ಇವ ಕುಟಿಲ ಕೃಷ್ಣಯ್ಯ.
ಕರುನಾಡ ಮುಷ್ಠಿಯಲಿಡಿದು
ಪುರಜನರ ಕಾಲಡಿಯಿಕ್ಕಿ
ಮಣ್ಣನ್ನೇ ಹೊನ್ನಾಗಿಸಿ ಮೆರೆದು
ಗಾಲಿಯನೇರಿದ ಜನಾರ್ಧನನೀಗ
ಕಂಬಿಯ ಹಿಂದೆ ಕಂಬಿನಿ ನುಂಗುತ
ಹುಸಿನಗೆ ಬೀರುತಿಹನು.
ಹುದ್ದೆಯ ಜಿದ್ದಿಗೆ ಬಿದ್ದು
ಟೊಂಕಕಟ್ಟಿ ದುಡಿದು
ಅಧಿಕಾರಕ್ಕೇರಿ, ದೋಚಿ-ಬಾಚಿ
ಕೊನೆಗಾಯ್ತು ಯಡ್ಡಿಯ ಅವಸಾನ.






