ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Saturday, November 12, 2011


 '' ಮುಸ್ಸಂಜೆ '' 

ಒಂದೊಂದು ಸುಕ್ಕಿನ ಸಾಲಿಗೂ 
ಮಾಗಿದ ಹಿರಿತನದ ಪಾಲಿದೆ 
ಸಾಗಿ ಬಂದ ದಾರಿಯ ನೆನಪಿದೆ 
ಕಷ್ಟ ಕಾರ್ಪಣ್ಯಗಳ ನೆರಳು ಹಿಂಬಾಲಿಸಿದೆ.
 
ನೆರಳು ಬೆಳಕಿನ ಆಟದಂತ ಜೀವನ 
ಆ ತಕ್ಷಣ ಬಿಸಿಲು, ಆಗಾಗ ಅಡ್ಡ ಬರುವ ಮೋಡ 
ಮಳೆಯಾಗಿ ಸುರಿಯೆ 
ಬಾಚಿಕೊಂಡ ಇಳೆಯಂತೆ ಬದುಕು 
ಉದುರಿಬಿದ್ದ ತಾರೆಗಳಂತೆ 
ಕುಡಿ ಹೊಡೆದು ಹೊರಬಂದ ನವ ಜೀವ 
ಸಾರ್ಥಕತೆಯ ಭಾವ...!
 
ಹೆಗಲಿಗೆ ನೊಗ ಕಟ್ಟಿ 
ಹಳ್ಳ ದಿಣ್ಣೆಗಳನು ಬಿಡದೆ 
ಉತ್ತಿ ಬಿತ್ತುವ ಕಾಯಕದಿ 
ಸವೆಸಿದ ದಿನಗಳೆಷ್ಟೋ 
ಮುಸ್ಸಂಜೆಗೆ ಆಸರೆಯಾಗದ 
ಬೆವರಿನ ನೆರಳುಗಳು...!
''ಹುಟ್ಟಿಸಿದ ದೇವರು ಹುಲ್ಲು ಮೇಯಿಸಲು 
ಸಾಧ್ಯವೇ'' 
ಸಂವತ್ಸರಗಳು ಬಂದಷ್ಟೇ ವೇಗದಲಿ ಮಾಯವಾಗಿ
ಸುಕ್ಕಿನ ಹಿಂದಿನ ಸಾಲಲಿ ಬಂದು ನಿಂತಿವೆ 
ಮುಸ್ಸಂಜೆಯು ಕರಗುವ ದಾರಿಯನು 
ಎದಿರು ನೋಡುತಾ......!
             ಪ್ರೀತಿಯಿಂದ ಸತೀಶ್.  ರಾಮನಗರ.

No comments:

Post a Comment