ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Wednesday, January 9, 2013

ಭ್ರಾಂತಿ ಎಂಬ ಸ್ಖಲನ
---------------------------

ಹುಳಿ-ಉಪ್ಪು ಮುಂದಾಗಿ
ಸೊಕ್ಕಿ ಉಕ್ಕುವ ಗೇಹ
ಬಯಕೆಯ ಬಾಣಲಿಯಲಿ-
ಸಂಡಿಗೆ. ಉಪ್ಪುಕಾರ ಜೊತೆಯಲಿ.

ಕನಸುಮೇಲೋಗರ.!
ಹಳ್ಳ ದಿಣ್ಣೆ  ತೆವರಿ ತಿಟ್ಟಿನ
ಬದದಾಚೆಗೀಚಿನ ತೂಗಿ ಬಾಗೊ
ಚಲುವಿನಾ ಪ್ರಕೃತಿ.

ಸೆಳೆಯಲಷ್ಟೇ ಸಾಕು; ವಿಕೃತಿ
ಮುಂದಾಗುವುದೆಲ್ಲ ವಿಸ್ಮೃತಿ
ಮೃಗಕ್ಕಿಲ್ಲ ಬಂಧುತ್ವ
ಅನಾಗರೀಕತೆಗಿಲ್ಲ ಸಾಧುತ್ವ.

ನೆನಪುಗಳ ನೇವರಿಸುವಾಗ
ನೆಪಕ್ಕೆಂದಿಟ್ಟಿದ್ದ ವೀರ್ಯ.., ಸ್ಖಲನ,
ಮತ್ತೇಕೆ ಬೇಕು ವ್ಯವಕಲನ
ಗಂಡು ಹೆಣ್ಣು ಅಂದರೆ ಸಂಕಲನ. 

 
ಸುಡುಗಾಡು ಬೆಂಕಿಯಲಿ-
ಬೆಂದ ದೇಹದ ತಾಪ
ಹಸಿ ಹಸಿ ವಾಸನೆಗೆ

ಬೇಕಿತ್ತು ನೆಪ.

ವಿವೇಕಕ್ಕಿಲ್ಲ  ವಿಶ್ಲೇಷಣೆ
ಕಾಮಕ್ಕೆಲ್ಲಿಯದು ಕಣ್ಣು
ಮೈಭಾರ ತಗ್ಗಬೇಕು
ಬಿಸಿಯುಸಿರ ಬಸಿಯಬೇಕು.! 


ಕಾಮಾದಿ ಬಯಕೆಯಲಿ
ನಾಯಿ ಮುಟ್ಟಿದ ಮಡಿಕೆ;ಮನಸು
ತೊಗಲಾಚೆಗೀಚಿನ ವ್ಯಾಮೋಹ
ಜೀವಮಾನ ಹರಣಕ್ಕಾರಣ.

1 comment:

  1. ಸಕಲ ರಸಗಳ ಮಿಶ್ರ ಮನುಜ ಕಾಯ! ಅದು ನೆಕ್ಕದೆಡೆಯಿಲ್ಲ!

    ReplyDelete