ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Wednesday, October 19, 2011


...ಮಾತೃದೇವೋಭವ ...
ನಾವು...
ಗಿರಿ ಶೃಂಗವೆನ್ನದೆ
ಕಲ್ಲು ಕಲ್ಲಿನಲ್ಲಿ ಹರಸುವೆವು 
ಕಾಣದ ದೇವರ,

ಇಲ್ಲ ಸಲ್ಲದ ಮೌಡ್ಯವ ನಂಬಿ  
ಗುಡಿ  ಗೋಪುರಗಳ ಕಟ್ಟಿ
ಕಂದಾಚಾರದ ಗುಂಡಿಗೆ ಬಿದ್ದು, 
ಮಠ ಮಾನ್ಯರ ಕಾಲಿಗೆ ಎರಗಿ 
ದೈವಾಂಶಕ್ಕೇರಿಸಿ ಪಾವನರಾಗುವ....

 ನಾವು ...
ಭಕುತಿಯ ನೆಪವಾಗಿರಿಸಿ 
ನೇಮ ನಿಷ್ಟೆಗಳ ಹೆಸರನ್ನಿರಿಸಿ
ಪಾಪ ಕರ್ಮಗಳ ಕೂಪಕೆ ತಳ್ಳಿ  
ಹೊಟ್ಟೆ ತುಂಬಿಸಿಕೊಳ್ಳುವ
ಹೊಟ್ಟೆಭಾಕರ ನಂಬುವೆವು....

ನಾವು...
ಕಣ್ಣ ಮುಂದಿನ ದೇವರ ಮರೆತು 
ಕಾಣದ ದೇವರ ಹಂಬಲಿಸಿ 
ಕಣ್ಣಿದ್ದು ಕುರುಡಾಗುವೆವು
ನಾವು...    

No comments:

Post a Comment