ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Sunday, May 6, 2012

---- ಮಧುಮೇಹ -----



ನಲ್ಲೆ..., ನಿನ್ನ 
ಬಿಗಿದಪ್ಪಿದೊಡೆನೆ ಸಿಹಿಮುತ್ತುಗಳ 
ರಾಶಿಯನ್ನೇ ನೀಡುತ್ತಿದೆ ನೀನು.
ಅದೆಷ್ಟೊಂದು  ಸಿಹಿ ಅಡಗಿರುತ್ತಿತ್ತು
ನಿನ್ನ ಮುತ್ತಿನಲಿ.....!!

ಆದರೀಗ ಕೊಡುವ ಮುತ್ತುಗಳಿಗೂ 
ಲೆಕ್ಕವಿಡುತ್ತೀಯಲ್ಲ,
ಜೀನಳಾಗಬೇಡ
ಮತ್ತಷ್ಟು ಕರುಣಿಸಲಾರೆಯ.....?

ನಾನೇನು ಮಾಡಲಿ ನಲ್ಲ
ಹೆಚ್ಚು ಸಿಹಿ ತಿನಿಸಬೇಡಿರೆಂದು
ವೈದ್ಯರು ತಿಳಿಸಿದ್ದಾರಲ್ಲ.....!!!

1 comment:

  1. ಅಯ್ಯೋ , ಎಂತಹ ವಿಪರ್ಯಾಸ :) ರೋಗದಲ್ಲೂ ಮಾತಿನ ಸರಸದ ವೈಖರಿ ಚೆನ್ನಾಗಿದೆ ಸತೀಶಣ್ಣ :):)

    ReplyDelete